ಕೋಲ್ಕತ್ತ: ಅರ್ಜುನ್ ದೇಶ್ವಾಲ್ ಅವರ ಭರ್ಜರಿ ರೈಡಿಂಗ್ (20 ಪಾಯಿಂಟ್ಸ್) ಬಲದಿಂದ ಹಾಲಿ ಚಾಂಪಿಯನ್ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡ, ಪ್ರೊ ಕಬಡ್ಡಿ ಲೀಗ್ನಲ್ಲಿ ಸೋಮವಾರ ಯು.ಪಿ ಯೋಧಾಸ್ ತಂಡವನ್ನು 67–30 ಪಾಯಿಂಟ್ಗಳ ದೊಡ್ಡ ಅಂತರದಿಂದ ಸದೆಬಡಿಯಿತು. ಇದರೊಂದಿಗೆ ಅಗ್ರಸ್ಥಾನವನ್ನು ಮರಳಿ ಪಡೆಯಿತು.
ದೇಶ್ವಾಲ್ ಅವರಿಗೆ ಸಬ್ಸ್ಟಿಟ್ಯೂಟ್ ರೈಡರ್ ಅಭಿಜಿತ್ ಮಲ್ಲಿಕ್ (9 ಪಾಯಿಂಟ್ಸ್), ರೈಡರ್ಗಳಾದ ಆಕಾಶ್ (7) ಮತ್ತು ಸುನೀಲ್ (5) ಬೆಂಬಲ ನೀಡಿದರು. ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಮುಖ ಆಟಗಾರರಿಲ್ಲದೇ ಕೋಲ್ಕತ್ತ ಲೆಗ್ನ ಕೊನೆಯ ಪಂದ್ಯ ಆಡಿದ ಯೋಧಾಸ್ ಪರ ದೊಡ್ಡ ಸೋಲನ್ನು ಕಂಡಿತು. ರೈಡರ್ ಗಗನ ಗೌಡ 10 ಪಾಯಿಂಟ್ಸ್ ಗಳಿಸಿದರು.
ಬೆಂಗಾಲ್ ವಾರಿಯರ್ಸ್ ದಿನದ ಎರಡನೇ ಪಂದ್ಯದಲ್ಲಿ ಯು ಮುಂಬಾ ತಂಡವನ್ನು 46–34 ಪಾಯಿಂಟ್ಗಳಿಂದ ಸೋಲಿಸಿತು. ವಾರಿಯರ್ಸ್ ಪರ ನಾಯಕ ಮಣಿಂದರ್ ಸಿಂಗ್ 10 ಪಾಯಿಂಟ್ಸ್, ಮುಂಬೈ ಪರ ರೈಡರ್ ಶಿವಂ 11 ಪಾಯಿಂಟ್ಸ್ ಗಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.