ADVERTISEMENT

ಕೆ.ವಿ. ಕ್ರೀಡಾಕೂಟ: ಕರ್ನಾಟಕಕ್ಕೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 19:22 IST
Last Updated 5 ಆಗಸ್ಟ್ 2025, 19:22 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಕೇಂದ್ರಿಯ ವಿದ್ಯಾಲಯಗಳ ಬೆಂಗಳೂರು ವಲಯದ ಬಾಲಕಿಯರ ತಂಡವು ಇಲ್ಲಿ ನಡೆಯುತ್ತಿರುವ ಕೇಂದ್ರಿಯ ವಿದ್ಯಾಲಯಗಳ ರಾಷ್ಟ್ರೀಯ ಕ್ರೀಡಾಕೂಟದ 14 ವರ್ಷದೊಳಗಿನವರ
ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಲು ವಿಫಲವಾಯಿತು.

ಹೆಬ್ಬಾಳದಲ್ಲಿರುವ ಕೇಂದ್ರಿಯ ವಿದ್ಯಾಲಯದ ಮೈದಾನದಲ್ಲಿ ಮಂಗಳವಾರ ನಡೆದ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಬೆಂಗಳೂರು ತಂಡವು ಗುವಾಹಟಿ ತಂಡದ ಎದುರು ಹೋರಾಡಿ 36–37ರಿಂದ ಸೋತಿತು.

ADVERTISEMENT

ನಂತರ ನಡೆದ ಕ್ವಾರ್ಟರ್‌ ಫೈನಲ್‌ ಸುತ್ತಿನ ಮೊದಲ ಪಂದ್ಯದಲ್ಲಿ ಕೋಲ್ಕತ್ತ 37–19ರಿಂದ ಲಖನೌ ವಿರುದ್ಧ; ಜಬಲ್‌ಪುರ 21–18ರಿಂದ ರಾಂಚಿ ವಿರುದ್ಧ; ದೆಹಲಿ 34–15ರಿಂದ ಆಗ್ರಾ ವಿರುದ್ದ; ಚೆನ್ನೈ 34–12ರಿಂದ ಜಮ್ಮು ವಿರುದ್ದ ಗೆಲುವು ಸಾಧಿಸಿ ಸೆಮಿಫೈನಲ್‌ ಹಂತಕ್ಕೆ ಪ್ರವೇಶಿಸಿದವು.

ಕೆ.ವಿ ಎಎಫ್‌ಎಸ್‌ ಯಲಹಂಕದಲ್ಲಿ ನಡೆದ ಬಾಲಕರ ವಿಭಾಗ 17ವರ್ಷದೊಳಗಿನ ಕಬಡ್ಡಿ ಫಲಿತಾಂಶ: ದೆಹಲಿ 31–28ರಿಂದ ಬೆಂಗಳೂರು ವಿರುದ್ದ; ಜೈಪುರ 33–25ರಿಂದ ಚೆನ್ನೈ ವಿರುದ್ದ; ಪಟ್ನಾ 29–13ರಿಂದ ವಾರಾಣಸಿ ವಿರುದ್ದ; ಕೋಲ್ಕತ್ತ 31–21ರಿಂದ ಡೆಹ್ರಾಡೂನ್‌ ವಿರುದ್ದ ಗೆಲುವು ಸಾಧಿಸಿದವು. ಸೆಮಿಫೈನಲ್‌ ಪಂದ್ಯದಲ್ಲಿ ಜೈಪುರ 44–42ರಿಂದ ದೆಹಲಿ ವಿರುದ್ದ ಹಾಗೂ ಕೋಲ್ಕತ್ತ 49–44ರಿಂದ ಜೈಪುರ ವಿರುದ್ದ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದವು.

ಸೆಮಿಫೈನಲ್‌ಗೆ ಭುವನೇಶ್ವರ: ಕೆ.ವಿ ಡಿಆರ್‌ಡಿಒದಲ್ಲಿ ನಡೆದ 17 ವರ್ಷದೊಳಗಿನ ಬಾಲಕಿಯರ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಭುವನೇಶ್ವರ 34–29ರಿಂದ ಜೈಪುರ ವಿರುದ್ದ ಹಾಗೂ ಚೆನ್ನೈ 30–25ರಿಂದ ಡೆಹ್ರಾಡೂನ್‌ ವಿರುದ್ದ ಗೆದ್ದು ಅಂತಿಮ ಸುತ್ತಿಗೆ ಪ್ರವೇಶಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.