ಬೆಂಗಳೂರು: ಯಶಸ್ಸಿನ ಓಟ ಮುಂದುವರಿಸಿದ ಹಿಮಾಂಶಿ ಚೌಧರಿ ಅವರು ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ 19 ವರ್ಷದೊಳಗಿನ ಬಾಲಕಿಯರ ಮತ್ತು ಮಹಿಳೆಯರ ಸಿಂಗಲ್ಸ್ನಲ್ಲಿ ಚಾಂಪಿಯನ್ ಆದರು. ಹಿಮಾಂಶಿ ಅವರು ಸೋಮವಾರ 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿಯೂ ಪ್ರಶಸ್ತಿ ಜಯಿಸಿದ್ದರು.
ಜಯನಗರ ಟೇಬಲ್ ಟೆನಿಸ್ ಸಂಸ್ಥೆ (ಜೆಟಿಟಿಎ) ಆಶ್ರಯದಲ್ಲಿ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ನಡೆದ ಮಹಿಳೆಯರ ವಿಭಾಗದ ಫೈನಲ್ನಲ್ಲಿ ಹಿಮಾಂಶಿ ಅವರು 13–11, 11–2, 9–11, 11–4, 11–8ರಿಂದ ತೃಪ್ತಿ ಪುರೋಹಿತ್ ಎದುರು ರೋಚಕ ಜಯ ಸಾಧಿಸಿ ಕಿರೀಟ ತಮ್ಮದಾಗಿಸಿಕೊಂಡರು.
ಮಹಿಳೆಯರ ವಿಭಾಗದ ಸೆಮಿಫೈನಲ್ ಪಂದ್ಯಗಳಲ್ಲಿ ತೃಪ್ತಿ 11–4, 11–6, 11–5, 13–11ರಿಂದ ಸಹನಾ ಮೂರ್ತಿ ವಿರುದ್ಧ; ಹಿಮಾಂಶಿ 7–11, 8–11, 11–3, 11–13, 11– 7, 11–8, 11–6ರಿಂದ ವೇದಲಕ್ಷ್ಮಿ ವಿರುದ್ಧ ಜಯ ಸಾಧಿಸಿದ್ದರು.
19 ವರ್ಷದೊಳಗಿನ ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಹಿಮಾಂಶಿ ಅವರು 9–11, 11–3, 5–11, 11–7, 11–8, 11–2ರಿಂದ ಇರೆನ್ ಅನ್ನಾ ಸುಭಾಷ್ ಅವರನ್ನು ಪರಾಭವಗೊಳಿಸಿದರು.
ವರುಣ್ ಚಾಂಪಿಯನ್:
ವರುಣ್ ಕಶ್ಯಪ್ ಅವರು ಪುರುಷರ ವಿಭಾಗದಲ್ಲಿ 12–10, 8–11, 11–8, 7–11, 11–5, 11–5ರಿಂದ ಸಂಜಯ್ ಮಾಧವನ್ ಅವರನ್ನು ಮಣಿಸಿ, ಪ್ರಶಸ್ತಿಗೆ ಮುತ್ತಿಕ್ಕಿದರು.
ಸೆಮಿಫೈನಲ್ ಪಂದ್ಯಗಳಲ್ಲಿ ವರುಣ್ 8–11, 5–11, 11–7, 7–11, 12–10, 11–6, 11–7ರಿಂದ ಅಭಿನವ್ ಮೂರ್ತಿ ಎದುರು ಹಾಗೂ ಸಂಜಯ್ ಅವರು 11–5, 11–5, 10–12, 10–12, 11–8, 11–6ರಿಂದ ಯಶವಂತ್ ಎದುರು ಗೆಲುವು ಸಾಧಿಸಿದ್ದರು.
ಉದಯೋನ್ಮುಖ ಆಟಗಾರ ಅಭಿನವ್ ಮೂರ್ತಿ ಅವರು 19 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಪ್ರಶಸ್ತಿ ಸುತ್ತಿನಲ್ಲಿ ಅಭಿನವ್ ಅವರು 11–5, 6–11, 13–11, 11–7, 7–11, 11–8ರಿಂದ ಅಥರ್ವ ನವರಂಗೆ ಅವರನ್ನು ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.