ADVERTISEMENT

ಕರ್ನಾಟಕ ತಂಡಕ್ಕೆ ಗಣೇಶ್‌ ನಾಯಕ

​ಪ್ರಜಾವಾಣಿ ವಾರ್ತೆ
Published 8 ಮೇ 2019, 18:40 IST
Last Updated 8 ಮೇ 2019, 18:40 IST

ಬೆಂಗಳೂರು: ಮಜ್ಜಿ ಗಣೇಶ್‌ ಅವರು ಹಾಕಿ ಇಂಡಿಯಾ ರಾಷ್ಟ್ರೀಯ ಸಬ್‌ ಜೂನಿಯರ್‌ ಬಾಲಕರ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ (‘ಎ’ ಡಿವಿಷನ್‌) ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.

ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಮೇ 11ರಿಂದ 22ರವರೆಗೆ ಛತ್ತೀಸಗಡದ ರಾಯಪುರದಲ್ಲಿ ಆಯೋಜನೆಯಾಗಿದೆ.

ಕರ್ನಾಟಕ ತಂಡವು ‘ಬಿ’ ಗುಂ‍ಪಿನಲ್ಲಿ ಸ್ಥಾನ ಗಳಿಸಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಭೋಪಾಲ ಹಾಗೂ ಮಹಾರಾಷ್ಟ್ರ ತಂಡಗಳೂ ಇದೇ ಗುಂಪಿನಲ್ಲಿ ಆಡಲಿವೆ.

ADVERTISEMENT

ತಂಡ ಇಂತಿದೆ: ರಾಮಜಿ ಪ್ರಶಾಂತ್‌ ಕುಮಾರ್‌, ನಿತಿನ್‌ ದಶರಥ ಕಾಟ್ಕೆ, ಅಂಕಿತ್‌, ಪ್ರೇಮ್‌, ಸಂದೀ‍ಪ್‌ ‍ಪಾಲ್‌ (ಗೋಲ್‌ಕೀಪರ್‌), ಜಿ.ವಿಶ್ವಾಸ್‌, ಮಜ್ಜಿ ಗಣೇಶ್‌ (ನಾಯಕ), ಎ.ಎಚ್‌.ದೀಕ್ಷಿತ್‌, ಎಂ.ಪಿ.ನಾಚಪ್ಪ, ಎಂ.ಎ.ಗೌತಮ್‌, ಬಿ.ಅರ್ಜುನ್‌, ವಿ.ವಿಕಾಸ್‌, ಕೆ.ಬಿ.ದೇವಯ್ಯ, ಈ.ಬಿ.ವಿನಾಯಕ (ಗೋಲ್‌ಕೀಪರ್‌), ಸಿ.ಪಿ.ಲಿವಿನ್‌, ದೇವೇಂದ್ರಪ್ಪ, ವಿಶಾಲ್‌ ಕುಮಾರ್‌ ಮತ್ತು ಆರ್‌.ಎಸ್‌.ದರ್ಶನ್‌. ಕೋಚ್‌: ಮನೋಹರ ಕಾಟ್ಕೆ, ಮ್ಯಾನೇಜರ್‌: ರಾಹುಲ್‌ ಕಾಟ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.