ADVERTISEMENT

ಶಿವಪ್ಪ, ಸೃಷ್ಟಿಗೆ ರಾಜ್ಯ ತಂಡದ ಸಾರಥ್ಯ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 15:58 IST
Last Updated 16 ಏಪ್ರಿಲ್ 2019, 15:58 IST

ಬೆಂಗಳೂರು: ಶಿವಪ್ಪ ಹಳಗಟ್ಟಿ ಮತ್ತು ಸೃಷ್ಟಿ ಅವರು ಮುಂಬರುವ ರಾಷ್ಟ್ರೀಯ ಮಿನಿ ವಾಲಿಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಕರ್ನಾಟಕದ 14 ವರ್ಷದೊಳಗಿನವರ ಬಾಲಕರ ಮತ್ತು ಬಾಲಕಿಯರ ತಂಡಗಳನ್ನು ಮುನ್ನಡೆಸಲಿದ್ದಾರೆ.

ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಏಪ್ರಿಲ್‌ 21ರಿಂದ 26ರವರೆಗೆ ಮಹಾರಾಷ್ಟ್ರದ ಶಿರಡಿಯಲ್ಲಿ ಆಯೋಜನೆಯಾಗಿದೆ. ಕರ್ನಾಟಕ ವಾಲಿಬಾಲ್‌ ಸಂಸ್ಥೆಯ ಅಡ್‌ಹಾಕ್‌ ಸಮಿತಿಯು ಮಂಗಳವಾರ ತಂಡಗಳನ್ನು ಪ್ರಕಟಿಸಿದೆ.

ತಂಡಗಳು ಇಂತಿದೆ:

ADVERTISEMENT

ಬಾಲಕರು: ಶಿವಪ್ಪ ಹಳಗಟ್ಟಿ (ನಾಯಕ), ಶಿವರಾಜ್‌, ಎಸ್‌.ಮನೋಜ್‌, ಆಕಾಶ್‌ ರಾವಲ್‌ (ಉಪ ನಾಯಕ), ಟಿ.ನವೀನ್‌, ರಿಯಾಜ್‌, ಪ್ರೇಮಚಂದ್ರ, ವಿಶ್ವ, ಪ್ರದೀಪ್‌, ಯತೀಂದ್ರ, ಭುವನ್‌ ಮತ್ತು ಎನ್‌.ಎಸ್‌.ಭರತ್‌ ಕುಮಾರ್. ಮುಖ್ಯ ಕೋಚ್‌: ನಾಮದೇವ್‌ ಮಿರಾಜ್‌ಕರ್‌. ಸಹಾಯಕ ಕೋಚ್‌: ವಿನೋದ್‌ ಕುಮಾರ್‌.

ಬಾಲಕಿಯರು: ಸೃಷ್ಟಿ (ನಾಯಕಿ), ಪ್ರೇಮಾ, ರೂಪಾ, ನೇತ್ರಾ, ಮಿನ್ನತ್‌ (ಉಪ ನಾಯಕಿ), ಭೂಮಿಕಾ, ಎಲ್‌.ಎನ್‌.ಲಿಖಿತಾ, ಯಕ್ಷಾ, ಅಂಜಲಿ, ಅನನ್ಯಾ, ಫ್ರೇಯಾ ಮತ್ತು ಅನುಶ್ರೀ. ಮುಖ್ಯ ಕೋಚ್‌: ಮಮತಾ ಶೆಟ್ಟಿ, ಸಹಾಯಕ ಕೋಚ್‌: ಕವಿತಾ ಅರಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.