ಬೆಂಗಳೂರು: ಕರ್ನಾಟಕ ಅಥ್ಲೆಟಿಕ್ ಸಂಸ್ಥೆಗೆ (ಕೆಎಎ) ಜಯ ಕರ್ನಾಟಕ ಸಂಸ್ಥೆಯ ಸ್ಥಾಪಕ ಮುತ್ತಪ್ಪ ರೈ ಅಧ್ಯಕ್ಷರಾಗುವುದು ಖಚಿತವಾಗಿದೆ. ಸಂಸ್ಥೆಯ ಚುನಾವಣೆ ಇದೇ 19ರಂದು ನಡೆಯಲಿದೆ. ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿತ್ತು. ಮುತ್ತಪ್ಪ ರೈ ಅವರ ವಿರುದ್ಧ ಯಾರೂ ನಾಮಪತ್ರ ಸಲ್ಲಿಸಲಿಲ್ಲ.
ಮುತ್ತಪ್ಪ ರೈ ಅವರಿಗೆ ರಾಮನಗರ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಸದಸ್ಯತ್ವ ನೀಡಲಾಗಿದ್ದು ಅವರು ನಾಮಪತ್ರ ಸಲ್ಲಿಸಲು ಅರ್ಹರಾಗಿದ್ದಾರೆ. ಹಾಲಿ ಕಾರ್ಯದರ್ಶಿ ರಾಜವೇಲು ಮತ್ತು ಚಿಕ್ಕಮಗಳೂರು ಜಿಲ್ಲಾ ಸಂಸ್ಥೆಯ ಪ್ರತಿನಿಧಿ ಸಿ.ಜಿ.ಮಂಜುನಾಥ ಅವರು ಕಾರ್ಯದರ್ಶಿ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ.
ನಾಪತ್ರಗಳ ಪರಿಶೀಲನೆ ಮಂಗಳವಾರ ನಡೆಯಲಿದ್ದು ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬುಧವಾರ ಪ್ರಕಟಿಸಲಾಗುವುದು.
ನಾಮಪತ್ರ ಸಲ್ಲಿಸಿದವರು: ಅಧ್ಯಕ್ಷ ಸ್ಥಾನ: ಮುತ್ತಪ್ಪ ರೈ (ರಾಮನಗರ ಜಿಲ್ಲಾ ಸಂಸ್ಥೆ), ಹಿರಿಯ ಉಪಾಧ್ಯಕ್ಷರು: ಎಚ್.ಡಿ.ಮಹದೇವ (ಹಾಸನ), ಉಪಾಧ್ಯಕ್ಷರು: ಜಿ.ಸೋಮಶೇಖರ, ಎಸ್.ಎಸ್.ಹಿರೇಮಠ (ವಿಜಯಪುರ), ಬಿ.ಎಲ್.ಭಾರತಿ (ತುಮಕೂರು), ಸದಾನಂದ ನಾಯಕ್ (ಕಾರವಾರ). ಕಾರ್ಯದರ್ಶಿ: ರಾಜವೇಲು, ಸಿ.ಜಿ.ಮಂಜುನಾಥ (ಚಿಕ್ಕಮಗಳೂರು), ಖಜಾಂಚಿ: ಸುನಿಲ್ ಕುಮರ್ ಶೆಟ್ಟಿ (ದಕ್ಷಿಣ ಕನ್ನಡ), ಉದಯ ಕುಮಾರ್ (ಶಿವಮೊಗ್ಗ), ಹಿರಿಯ ಜಂಟಿ ಕಾರ್ಯದರ್ಶಿ: ಅಜಯ್ ಕುಮಾರ್ (ಚಿಕ್ಕಮಗಳೂರು), ಜಂಟಿ ಕಾರ್ಯದರ್ಶಿ: ಆರ್.ಎಸ್.ಕಲ್ಲೇಶ್ (ಚಿತ್ರದುರ್ಗ), ಪ್ರಭಾಕರ್ (ತುಮಕೂರು).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.