ADVERTISEMENT

ವಾಲಿಬಾಲ್: ನಾರಾಯಣಗುರು, ಎಸ್‌ಡಿಎಂ ಚಾಂಪಿಯನ್‌

ನಾಗೇಶ್ ಡಿ ಸ್ಮರಣಾರ್ಥ ಕಾಲೇಜು ವಿದ್ಯಾರ್ಥಿಗಳ ಟೂರ್ನಿ; ಎಸ್‌ಡಿಎಂ, ಏಸರ್ಸ್‌ ರನ್ನರ್ ಅಪ್‌

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 17:24 IST
Last Updated 29 ಜನವರಿ 2023, 17:24 IST
ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಉಜಿರೆಯ ಎಸ್‌ಡಿಎಂ ಕಾಲೇಜು ತಂಡದ ಸಂಭ್ರಮ
ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಉಜಿರೆಯ ಎಸ್‌ಡಿಎಂ ಕಾಲೇಜು ತಂಡದ ಸಂಭ್ರಮ   

ಮಂಗಳೂರು: ಇಲ್ಲಿನ ನಾರಾಯಣಗುರು ಕಾಲೇಜು ಮತ್ತು ಉಜಿರೆಯ ಎಸ್‌ಡಿಎಂ ಕಾಲೇಜು ತಂಡಗಳು ಮಂಗಳಾ ಫ್ರೆಂಡ್ಸ್ ಸರ್ಕಲ್‌ ಮತ್ತು ಸುರತ್ಕಲ್‌ ಸ್ಪೋರ್ಟ್ಸ್‌ ಕ್ಲಬ್‌ ನಾಗೇಶ್ ಡಿ ಸ್ಮರಣಾರ್ಥ ಆಯೋಜಿಸಿದ್ದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ವಾಲಿಬಾಲ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದ ಚಾಂಪಿಯನ್‌ ಪಟ್ಟ ಅಲಂಕರಿಸಿದವು.

ಉರ್ವಸ್ಟೋರ್‌ನ ಮಂಗಳಾ ಫ್ರೆಂಡ್ಸ್‌ ಸರ್ಕಲ್ ಅಂಗಣದಲ್ಲಿ ಶನಿವಾರ ರಾತ್ರಿ ನಡೆದ ಬಾಲಕರ ವಿಭಾಗದ ಫೈನಲ್‌ನಲ್ಲಿ ನಾರಾಯಣ ಗುರು ತಂಡ ಎಸ್‌ಡಿಎಂ ವಿರುದ್ಧ 25-22, 25-23ರಲ್ಲಿ ಜಯ ಗಳಿಸಿತು. ಬಾಲಕಿಯರ ವಿಭಾಗದಲ್ಲಿ ಎಸ್‌ಡಿಎಂ ತಂಡ ಉಡುಪಿಯ ಏಸರ್ಸ್‌ ಎದುರು ಜಯ ಸಾಧಿಸಿತು.

ಬಾಲಕರ ವಿಭಾಗದ ಸೆಮಿಫೈನಲ್‌ನಲ್ಲಿ ಮೂಡುಬಿದಿರೆ ಆಳ್ವಾಸ್ ತಂಡದ ವಿರುದ್ಧ ನಾರಾಯಣ ಗುರು ಕಾಲೇಜು 23-25, 25-21, 15-12ರ ಜಯ ಗಳಿಸಿದರೆ ಎಸ್‌ಡಿಎಂ 25-19, 25-18ರಲ್ಲಿ ಉಡುಪಿಯ ಪೂರ್ಣಪ್ರಜ್ಞಾ ಕಾಲೇಜನ್ನು ಮಣಿಸಿತು. ಮೂಡುಬಿದಿರೆ ಆಳ್ವಾಸ್ ತಂಡ ಮೂರನೇ ಸ್ಥಾನ ಮತ್ತು ಪೂರ್ಣಪ್ರಜ್ಞ ಕಾಲೇಜು ನಾಲ್ಕನೇ ಸ್ಥಾನ ಪಡೆದುಕೊಂಡಿತು.

ADVERTISEMENT

ಬಾಲಕಿಯರ ವಿಭಾಗದಲ್ಲಿ ಮೂರು ಮತ್ತು ನಾ‌ಲ್ಕನೇ ಸ್ಥಾನ ಕ್ರಮವಾಗಿ ಮುಂಡಾಜೆಯ ವಿವೇಕಾನಂದ ಕಾಲೇಜು ಮತ್ತು ಮಂಗಳಾ ಫ್ರೆಂಡ್ಸ್‌ ಸರ್ಕಲ್ ತಂಡಗಳ ಪಾಲಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.