ADVERTISEMENT

ಬ್ಯಾಡ್ಮಿಂಟನ್‌: ನಿಖಿತಾ–ಜಾಗೃತಿಗೆ ಗೆಲುವು

ರೆಡ್‌ಬುಲ್‌ ಶಟಲ್ಸ್ಅಪ್‌ ಬ್ಯಾಡ್ಮಿಂಟನ್‌ ಬೆಂಗಳೂರು ಕ್ವಾಲಿಫೈಯರ್ಸ್

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 20:00 IST
Last Updated 16 ನವೆಂಬರ್ 2019, 20:00 IST

ಬೆಂಗಳೂರು: ನಿಖಿತಾ ರಾಮಕೃಷ್ಣ– ಕುಮಾರಿ ಜಾಗೃತಿ ಜೋಡಿಯು ರೆಡ್‌ ಬುಲ್‌ ಶಟಲ್ಸ್ ಅಪ್‌ ಬ್ಯಾಡ್ಮಿಂಟನ್‌ ಟೂರ್ನಿಯ ಬೆಂಗಳೂರು ಕ್ವಾಲಿ ಫೈಯರ್ಸ್ ಜಯಿಸಿದರು. ಇದರೊಂದಿಗೆ ರಾಷ್ಟ್ರೀಯ ಫೈನಲ್ಸ್‌ಗೆ ಅರ್ಹತೆ ಗಳಿಸಿದರು.

ಶನಿವಾರ ನಡೆದ ಫೈನಲ್‌ ಪಂದ್ಯದಲ್ಲಿ ಅವರು ಪೂಜಿತಾ ಹಾಗೂ ನಿಹಾರಿಕಾ ಶ್ರೀಧರ್‌ ಜೋಡಿಯನ್ನು 11–8, 11–4ರಿಂದ ಸೋಲಿಸಿದರು.

ರಾಷ್ಟ್ರೀಯ ಫೈನಲ್ಸ್ ಟೂರ್ನಿಯು ಡಿಸೆಂಬರ್‌ 8ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.