ADVERTISEMENT

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಶ್ರೀಕಾಂತ್‌ ಸವಾಲು ಅಂತ್ಯ

ಪಿಟಿಐ
Published 17 ಅಕ್ಟೋಬರ್ 2020, 5:50 IST
Last Updated 17 ಅಕ್ಟೋಬರ್ 2020, 5:50 IST
ಕಿಡಂಬಿ ಶ್ರೀಕಾಂತ್ ಆಟದ ವೈಖರಿ–ಪಿಟಿಐ ಚಿತ್ರ
ಕಿಡಂಬಿ ಶ್ರೀಕಾಂತ್ ಆಟದ ವೈಖರಿ–ಪಿಟಿಐ ಚಿತ್ರ   

ಒಡೆನ್ಸ್: ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಕಿದಂಬಿ ಶ್ರೀಕಾಂತ್‌ ಅವರ ಸವಾಲು ಅಂತ್ಯವಾಗಿದೆ. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಅವರು 22–20, 13–21, 16–21ರಿಂದ ತೈಪೆಯ ಚೌ ಟಿನ್‌ ಚೆನ್‌ ಅವರಿಗೆ ಸೋತರು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲೂ ಕೊನೆಗೊಂಡಿತು.

ಮೊದಲ ಗೇಮ್‌ನಲ್ಲಿ ಗೆದ್ದು ಭರವಸೆ ಮೂಡಿಸಿದ್ದ ಶ್ರೀಕಾಂತ್‌, ಬಳಿಕದ ಎರಡು ಗೇಮ್‌ಗಳಲ್ಲಿ ನಿರಾಶಾದಾಯಕ ಸಾಮರ್ಥ್ಯ ತೋರಿದರು. ಒಂದು ತಾಸು ಎರಡು ನಿಮಿಷಗಳಲ್ಲಿ ಪಂದ್ಯ ವಶಪಡಿಸಿಕೊಂಡ ಚೆನ್‌ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು.

ಟೂರ್ನಿಯಲ್ಲಿ ಭಾರತದ ಲಕ್ಷ್ಯ ಸೇನ್‌ ಅವರು ಎರಡನೇ ಸುತ್ತಿನಲ್ಲಿ ನಿರ್ಗಮಿಸಿದ್ದರೆ, ಶುಭಾಂಕರ್ ಡೇ ಹಾಗೂ ಅಜಯ್‌ ಜಯರಾಮ್‌ ಅಭಿಯಾನ ಮೊದಲ ಸುತ್ತಿನಲ್ಲೇ ಮುಗಿದಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.