ಬ್ಯಾಸ್ಕೆಟ್ಬಾಲ್
ಬೆಂಗಳೂರು: ಶಶಿಧರ್ ಅವರ ಅಮೋಘ ಆಟದ ನೆರವಿನಿಂದ ಎಚ್ಬಿಆರ್ ಬಿ.ಸಿ ತಂಡವು ಎಸ್.ರಂಗರಾಜನ್ ಸ್ಮರಣಾರ್ಥ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಸಿ ಡಿವಿಷನ್ ಲೀಗ್ ಪುರುಷರ ಬ್ಯಾಸ್ಕೆಟ್ಬಾಲ್ ಪಂದ್ಯದಲ್ಲಿ 83–54ರಿಂದ ಎ.ವಿ ಬಿ.ಸಿ ತಂಡವನ್ನು ಮಣಿಸಿತು.
ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್ಬಾಲ್ ಕೋರ್ಟ್ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ವಿರಾಮದ ವೇಳೆಗೆ 32–18 ಮುನ್ನಡೆ ಗಳಿಸಿದ್ದ ಎಚ್ಬಿಆರ್ ತಂಡವು ಉತ್ತರಾರ್ಧದಲ್ಲೂ ಪಾರಮ್ಯ ಸಾಧಿಸಿತು. ಶಶಿಧರ್ 25 ಅಂಕ ಗಳಿಸಿದರೆ, ಅವರಿಗೆ ಸುದರ್ಶನ್ (12) ಸಾಥ್ ನೀಡಿದರು. ಎ.ವಿ ತಂಡದ ಜಯಂತ್ ಮತ್ತು ಚಿರಾಗ್ ಕ್ರಮವಾಗಿ 20 ಮತ್ತು 10 ಅಂಕ ಕಲೆಹಾಕಿದರು.
ಫಲಿತಾಂಶ: ಲೀಗ್ ಪಂದ್ಯಗಳು: ಎಚ್ಬಿಆರ್ ಬಿ.ಸಿ (ಶಶಿಧರ್ 25, ಸುದರ್ಶನ್ 12) 83–54 ಎ.ವಿ ಬಿ.ಸಿ (ಜಯಂತ್ 20, ಚಿರಾಗ್ 10) ವಿರುದ್ಧ; ಹಲಸೂರು ಬಿ.ಸಿ (ತೇಜಸ್ 18, ವಿನಯ್ 12) 80–30ರಿಂದ ಓರಿಯನ್ಸ್ ಎಸ್.ಸಿ (ಅನೀಶ್ ರಾವ್ 11) ವಿರುದ್ಧ; ಅಪ್ಪಯ್ಯ ಬಿ.ಸಿ (ವಿನೀತ್ 12) 55–38ರಿಂದ ಹೊಸಕೋಟೆ ಬಿ.ಸಿ (ಧನವೀರ್ 11) ವಿರುದ್ಧ; ರಾಜ್ಕುಮಾರ್ ಬಿ.ಸಿ (ಅಶುತೋಷ್ 15, ದಿವಾಶ್ 13) 67–49ರಿಂದ ಯಂಗ್ ಬುಲ್ಸ್ ಬಿ.ಸಿ (ಉದಯ್ 16, ಸನ್ಮಿತ್ 11) ವಿರುದ್ಧ ಗೆಲುವು ಸಾಧಿಸಿತು.
ಸಿನ್ಸಿನಾಟಿಕ್ಸ್ ಬಿ.ಸಿ (ಶಶಾಂಕ್ ಸಮಕ್ 20, ಅನಿಲ್ ಬಾಬು 17) 81–73ರಿಂದ ಸಿಜೆಸಿ (ಪ್ರದ್ಯುಮ್ನ 21, ವಿನೋದ್ 19) ಎದುರು; ಮೌಂಟ್ಸ್ ಕ್ಲಬ್ (ಆಂಡ್ರ್ಯೂ 19, ಬಿನ್ನು ಬೆನ್ನಿ 10) 46–43ರಿಂದ ಸಹಕಾರನಗರ ಬಿ.ಸಿ (ಸೋಹನ್ 15) ಎದುರು; ಡಿಆರ್ಡಿಒ (ಬೆಬಿನ್ 18, ಶಾನ್ 10) 69–37ರಿಂದ ಲಕ್ಷ್ಮಣ್ ಬಿ.ಸಿ (ಕೆವಿನ್ 13) ಎದುರು ಜಯ ಸಾಧಿಸಿತು.
ಸಿ ಡಿವಿಷನ್ನ ಮುಂದಿನ ಪಂದ್ಯಗಳು ಇದೇ 28ರಿಂದ ಪುನರಾರಂಭಗೊಳ್ಳಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.