ADVERTISEMENT

ಟೇಬಲ್‌ ಟೆನಿಸ್‌: ಶ್ರೀಜಿತ್‌ ಪ್ರಣವಿಗೆ ಪ್ರಶಸ್ತಿ ಗರಿ

ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಗೆ ತೆರೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 20:15 IST
Last Updated 15 ಸೆಪ್ಟೆಂಬರ್ 2019, 20:15 IST
ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದವರು: (ಎಡದಿಂದ) ಎಚ್‌.ಎ.ಪ್ರಣವಿ, ಪಿ.ವಿ.ಶ್ರೀಕಾಂತ್‌ ಕಶ್ಯಪ್, ಬಿ.ಎನ್‌.ಶ್ರೀಜಿತ್‌, ಕೆ.ಕೆ.ಆಕಾಶ್, ಎನ್‌.ಅರ್ಣವ್, ಯಶಸ್ವಿನಿ ಘೋರ್ಪಡೆ, ಆಯುಷಿ ಬಾಲಕೃಷ್ಣ ಗೋಡ್ಸೆ, ಅನಿರ್ಬನ್‌ ರಾಯ್‌ ಚೌಧರಿ ಮತ್ತು ಎ.ನಿಹಾರಿಕಾ
ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದವರು: (ಎಡದಿಂದ) ಎಚ್‌.ಎ.ಪ್ರಣವಿ, ಪಿ.ವಿ.ಶ್ರೀಕಾಂತ್‌ ಕಶ್ಯಪ್, ಬಿ.ಎನ್‌.ಶ್ರೀಜಿತ್‌, ಕೆ.ಕೆ.ಆಕಾಶ್, ಎನ್‌.ಅರ್ಣವ್, ಯಶಸ್ವಿನಿ ಘೋರ್ಪಡೆ, ಆಯುಷಿ ಬಾಲಕೃಷ್ಣ ಗೋಡ್ಸೆ, ಅನಿರ್ಬನ್‌ ರಾಯ್‌ ಚೌಧರಿ ಮತ್ತು ಎ.ನಿಹಾರಿಕಾ   

ಮೈಸೂರು: ಬಿ.ಎನ್‌.ಶ್ರೀಜಿತ್‌ ಮತ್ತು ಎಚ್‌.ಎ.ಪ್ರಣವಿ ಅವರು ಭಾನುವಾರ ಇಲ್ಲಿ ಕೊನೆಗೊಂಡ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಕೆಡೆಟ್‌ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು.

ಮೈಸೂರು ಜಿಲ್ಲಾ ಟೇಬಲ್‌ ಟೆನಿಸ್‌ ಸಂಸ್ಥೆ ಆಶ್ರಯದಲ್ಲಿ ವಿ.ವಿ ಜಿಮ್ನೇಷಿಯಂ ಹಾಲ್‌ನಲ್ಲಿ ನಡೆದ ಟೂರ್ನಿಯ ಬಾಲಕರ ವಿಭಾಗದ ಫೈನಲ್‌ನಲ್ಲಿ ಎಸ್‌ಬಿಟಿಟಿ ಅಕಾಡೆಮಿಯ ಶ್ರೀಜಿತ್ 11-13,11-6,13-11,7-11,11-8 ರಲ್ಲಿ ತಮ್ಮದೇ ಆಕಾಡೆಮಿಯ ಕೆ.ಆಯುಷ್‌ ಅವರನ್ನು ಮಣಿಸಿದರು.

ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಪ್ರಣವಿ 15-13,11-3,8-11,11-8 ರಲ್ಲಿ ನೀತಿ ಅಗರ್‌ವಾಲ್‌ ವಿರುದ್ಧ ಗೆದ್ದರು.

ADVERTISEMENT

ಅರ್ಣವ್, ಆಯುಷಿಗೆ ಪ್ರಶಸ್ತಿ: ಎನ್‌.ಅರ್ಣವ್ ಮತ್ತು ಆಯುಷಿ ಬಾಲಕೃಷ್ಣ ಗೋಡ್ಸೆ ಅವರು ಕ್ರಮವಾಗಿ ಮಿನಿ ಕೆಡೆಟ್‌ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಫೈನಲ್‌ನಲ್ಲಿ ಅರ್ಣವ್ 11-9,11-9,11-4ರಲ್ಲಿ ಅಥರ್ವ ನವರಂಗೆ ವಿರುದ್ಧ; ಆಯುಷಿ 11-8,3-11,11-5,8-11,11-4 ರಲ್ಲಿ ಸುಮೇದಾ ಕೆ.ಎಸ್‌.ಭಟ್ ವಿರುದ್ಧ ಜಯ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.