ADVERTISEMENT

ಬೆಂಗಳೂರು ಓಪನ್: ಸಾಕೇತ್‌ಗೆ ವೈಲ್ಡ್‌ಕಾರ್ಡ್‌

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2018, 20:16 IST
Last Updated 8 ನವೆಂಬರ್ 2018, 20:16 IST
ಸಾಕೇತ್ ಮೈನೆನಿ
ಸಾಕೇತ್ ಮೈನೆನಿ   

ಬೆಂಗಳೂರು: ಭರವಸೆಯ ಆಟಗಾರ ಸಾಕೇತ್ ಮೈನೇನಿ ಅವರು ಬೆಂಗಳೂರು ಓಪನ್ ಎಟಿಪಿ ಟೆನಿಸ್ ಟೂರ್ನಿಯಲ್ಲಿ ವೈಲ್ಡ್‌ ಕಾರ್ಡ್‌ ಪ್ರವೇಶ ಗಿಟ್ಟಿಸಿದ್ದಾರೆ.

‘ಭಾರತದ ಟೆನಿಸ್‌ನಲ್ಲಿ ಸಾಕೇತ್ ಪ್ರತಿಭಾವಂತ ಆಟಗಾರನಾಗಿದ್ದಾರೆ. ಉತ್ತಮ ರ‍್ಯಾಂಕಿಂಗ್ ಹೊಂದಿರುವ ಅವರು ಇಲ್ಲಿ ಆಡುತ್ತಿದ್ದಾರೆ. ಶರವೇಗದ ಸರ್ವ್‌ಗಳಿಗೆ ಹೆಸರುವಾಸಿಯಾಗಿರುವ ಸಾಕೇತ್ ಅವರ ಆಟವನ್ನು ನೋಡುವ ಅವಕಾಶ ಇಲ್ಲಿಯವರಿಗೆ ಸಿಗಲಿದೆ’ ಎಂದು ಟೂರ್ನಿ ನಿರ್ದೇಶಕ ಸುನಿಲ್ ಯಜಮಾನ್ ತಿಳಿಸಿದ್ದಾರೆ.

ಹಾಲಿ ಚಾಂಪಿಯನ್ ಸುಮಿತ್ ನಗಾಲ್, 2017ರಲ್ಲಿ ರಾಷ್ಟ್ರೀಯ ರನ್ನರ್‌ ಅಪ್ ಸೂರಜ್ ಪ್ರಬೋಧ್ ಮತ್ತು ಸ್ಥಳೀಯ ಆಟಗಾರ ಆದಿಲ್ ಕಲ್ಯಾಣಪುರ್ ಅವರು ಈಗಾಗಲೇ ವೈಲ್ಡ್‌ಕಾರ್ಡ್‌ ಪಡೆದಿದ್ಧಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.