ಬೆಂಗಳೂರು: ಅಪೂರ್ವ ಆಟ ಆಡಿದ ಕರ್ನಾಟಕದ ಸೂರಜ್ ಪ್ರಭೋದ್, ಬೆಂಗಳೂರು ಓಪನ್ ವೈಲ್ಡ್ ಕಾರ್ಡ್ ಎಐಟಿಎ ರ್ಯಾಂಕಿಂಗ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.
ಕೆಎಸ್ಎಲ್ಟಿಎ ಅಂಗಳದಲ್ಲಿ ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಅಗ್ರಶ್ರೇಯಾಂಕದ ಆಟಗಾರ ಸೂರಜ್ 7–6, 4–6, 6–3ರಲ್ಲಿ ತಮಿಳುನಾಡಿನ ನಾಲ್ಕನೇ ಶ್ರೇಯಾಂಕದ ಆಟಗಾರ ಮೋಹಿತ್ ಮಯೂರ್ ಜಯಪ್ರಕಾಶ್ ಅವರನ್ನು ಸೋಲಿಸಿದರು.
ಈ ಗೆಲುವಿನೊಂದಿಗೆ ಸೂರಜ್ ಅವರು ಮುಂಬರುವ ಬೆಂಗಳೂರು ಎಟಿಪಿ ಚಾಲೆಂಜರ್ ಟೂರ್ನಿಗೆ ‘ವೈಲ್ಡ್ ಕಾರ್ಡ್’ ಅರ್ಹತೆ ಗಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.