ಬೆಂಗಳೂರು: ಮೂರನೇ ಶ್ರೇಯಾಂಕದ ಎ.ದೀಪಕ್ ಮತ್ತು ಆರನೇ ಶ್ರೇಯಾಂಕದ ರಿಷಿ ರೆಡ್ಡಿ ಅವರು ಎಐಟಿಎ ಟಿಎನ್ಆರ್ ಸ್ಮರಣಾರ್ಥ ಆಲ್ ಇಂಡಿಯನ್ ರ್ಯಾಂಕಿಂಗ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ನಲ್ಲಿ ಫೈನಲ್ ಪ್ರವೇಶಿಸಿದರು.
ಇಲ್ಲಿನ ಟಾಪ್ಸ್ಪಿನ್ ಕೋರ್ಟ್ನಲ್ಲಿ ಶುಕ್ರವಾರ ನಡೆದ ಸೆಮಿಫೈನಲ್ನಲ್ಲಿ ದೀಪಕ್ 6-3, 6-1ರಿಂದ ಕರಣ್ ಥಾಪಾ ಅವರನ್ನು ಸೋಲಿಸಿದರು. ಮತ್ತೊಂದು ಪಂದ್ಯದಲ್ಲಿ ರಿಷಿ 6–3, 6–2ರಿಂದ ರೋಹಿತ್ ಹರಿ ಬಾಲಾಜಿ ಅವರನ್ನು ಹಿಮ್ಮೆಟ್ಟಿಸಿದರು.
ಮಹಿಳೆಯರ ವಿಭಾಗದಲ್ಲಿ ಹರ್ಷಿಣಿ ನಾಗರಾಜ್ ಮತ್ತು ಜೆನ್ನಿಫರ್ ಲುಕಿಯಂ ಪ್ರಶಸ್ತಿ ಸುತ್ತಿಗೆ ಮುನ್ನಡೆದರು. ನಾಲ್ಕರ ಘಟ್ಟದಲ್ಲಿ ಹರ್ಷಿಣಿ 6-2, 6-2ರಿಂದ ನಾಲ್ಕನೇ ಶ್ರೇಯಾಂಕದ ಚೇವಿಕಾ ರೆಡ್ಡಿಗೆ ಆಘಾತ ನೀಡಿದರು. ಜೆನ್ನಿಫರ್ 6-2, 6-1ರಿಂದ ಅವನಿ ಸುಜಿತ್ ಚಿತಳೆ ಅವರನ್ನು ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.