ಬೆಂಗಳೂರು: ಕರ್ನಾಟಕದ ಬಿ.ಆರ್.ನಿಕ್ಷೇಪ್ ಅವರು ಹೈದರಾಬಾದ್ನಲ್ಲಿ ನಡೆಯುತ್ತಿರುವ ಎಐಟಿಎ ರಾಷ್ಟ್ರೀಯ ರ್ಯಾಂಕಿಂಗ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ತಲುಪಿದರು.
ಮಂಗಳವಾರ ನಡೆದ ಕ್ವಾರ್ಟರ್ಫೈನಲ್ ಹಣಾಹಣಿಯಲ್ಲಿ ಬೆಂಗಳೂರಿನ ಸುರಾನ ಕಾಲೇಜು ವಿದ್ಯಾರ್ಥಿ ನಿಕ್ಷೇಪ್, ಅಸ್ಸಾಂನ ಶೇಖ್ ಇಫ್ತಿಕಾರ್ ಜೊತೆಗೂಡಿ 6-2,6-0ರಿಂದ ಕರ್ನಾಟಕದ ಸಿದ್ಧಾರ್ಥ್ ಗಂಗಾತ್ಕರ್ ಹಾಗೂ ತಮಿಳುನಾಡಿನ ಪ್ರಾಣೇಶ್ ಬಾಬು ಅವರನ್ನು ಮಣಿ ಸಿದರು.
ನಾಲ್ಕರ ಘಟ್ಟದಲ್ಲಿ ನಿಕ್ಷೇಪ್ ಜೋಡಿಗೆ ತೆಲಂಗಾಣದ ಶಿವದೀಪ್ ಕೋಸರಾಜು–ಎ.ಕೆ.ರೋಹಿತ್ ಸವಾಲು ಎದುರಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.