ADVERTISEMENT

ಟ್ವಿಟರ್‌ನಲ್ಲಿ 'ಒಂದ್ ಕೈ ನೋಡ್ತೀವಿ' ಟ್ರೆಂಡಿಂಗ್

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 6:44 IST
Last Updated 19 ಮಾರ್ಚ್ 2019, 6:44 IST
   

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದಿಂದ ಸ್ಪರ್ಧಿಸುವಂತೆ ಕೋರಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪತ್ರ ಬರೆದಿದ್ದಾರೆ.ಹಾಗಾಗಿ ರಾಹುಲ್ ಗಾಂಧಿ ಕರ್ನಾಟಕದಿಂದಲೇ ಸ್ಪರ್ಧಿಸಲಿ, ಈ ಮೂಲಕ ಇಂದಿರಾ, ಸೋನಿಯಾರನ್ನು ಲೋಕಸಭೆಗೆ ಕಳುಹಿಸಿಕೊಟ್ಟ ಕಪ್ಪು ಚುಕ್ಕಿಯನ್ನು ನಾವು ಅಳಿಸುತ್ತೇವೆ.ಇದು ನಮ್ಮ ಸವಾಲು. ರಾಹುಲ್ ಗಾಂಧಿ ತಮ್ಮ ಲೋಕಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲಿ. ನಾವು ಅವರನ್ನು ಸೋಲಿಸುತ್ತೇವೆ. #WeWillHandleHim #ಒಂದ್_ಕೈ_ನೋಡ್ತೀವಿ ಎಂಬ ಹ್ಯಾಶ್‍ಟ್ಯಾಗ್‍ನೊಂದಿಗೆ ಚಕ್ರವರ್ತಿ ಸೂಲಿಬೆಲೆ ಸರಣಿ ಟ್ವೀಟ್ ಮಾಡಿದ್ದಾರೆ.

ಇದೇ ಹ್ಯಾಶ್‍ಟ್ಯಾಗ್ ಬಳಸಿದ ಟ್ಟೀಟಿಗರುರಾಹುಲ್ ಕರ್ನಾಟಕದ ಲೋಕಸಭಾ ಸೀಟಿನಲ್ಲಿ ನಿಂತರೆ ಗೆಲ್ಲುವುದಿಲ್ಲ ಎಂದು ಟ್ವೀಟಿಸಿದ್ದಾರೆ.

ವಾರಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸಲಿದ್ದ ಸೀಟನ್ನು ಆಮ್ ಆದ್ಮಿ ಪಕ್ಷ ಕಾಂಗ್ರೆಸ್‍ಗೆ ಬಿಟ್ಟುಕೊಟ್ಟಿದೆ. ಕಾಂಗ್ರೆಸ್ ಅದನ್ನು ಸಮಾಜವಾದಿ ಪಕ್ಷಕ್ಕೆ ಕೊಟ್ಟಾಗ, ಸಮಾಜವಾದಿ ಪಕ್ಷ ಅದನ್ನು ಬಿಎಸ್‍ಪಿಗೆ ಕೊಟ್ಟಿದೆ, ಬಿಎಸ್‍ಪಿ ಅಭ್ಯರ್ಥಿ ಬಿಜೆಪಿ ಸೇರಿದ್ದಾರೆ, ಅಮೇಠಿ ಅಭ್ಯರ್ಥಿ ಈಗ ಕರ್ನಾಟಕದಲ್ಲಿ ಸ್ಪರ್ಧಿಸುತ್ತಾರೆ ಎಂದು ನಳೀನ್ ಕುಮಾರ್ ಕಟೀಲ್ ಟ್ವೀಟಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.