‘ತಂತ್ರಜ್ಞಾನಕ್ಕೆ ಬೇಕು ಮಾನವೀಯ ಸ್ಪರ್ಶ’ (7.12.13– ಕೋಡಿಬೆಟ್ಟು ರಾಜಲಕ್ಷ್ಮಿ) ತಂತ್ರಜ್ಞಾನವನ್ನು ಪ್ರಕೃತಿಗೆ ಪೂರಕವಾಗಿ ಬಳಸಿಕೊಳ್ಳದೇ ಇದ್ದರೆ ಎಂತಹ ದುರಂತಗಳು ಘಟಿಸುತ್ತವೆ ಎಂಬುದಕ್ಕೆ ಜ್ವಲಂತ ನಿದರ್ಶನವಾಗಿದೆ.
–ರಾಜಲಕ್ಷ್ಮಿ ಬೆಂಗಳೂರು, ಗೀತಾ ಎಂ.ಎನ್. ಹುಬ್ಬಳ್ಳಿ, ಕುಬೇರಪ್ಪ ಎಂ. ವಿಭೂತಿ ಹರಿಹರ
‘ಕೊಂಡಿ’ (ಶಾಂತಿ ನಾಯಕ) ಮಿನಿಕಥೆ ಭಾವನಾತ್ಮಕವಾಗಿದ್ದು ಸ್ತ್ರೀಯರ ಮನಸ್ಸಿಗೆ ಸ್ಪಂದಿಸಿದೆ.
ಉಮಾದೇವಿ ಯೋಗ
‘ರಕ್ಷಕರೇ ಭಕ್ಷಕರಾದಾಗ’ (30.11.13– ಡಾ. ಎಂ.ಡಿ.ಸೂರ್ಯಕಾಂತ) ವಿಶ್ಲೇಷಣೆ ಬಹಳ ಅರ್ಥಪೂರ್ಣವಾಗಿದೆ. ಮಕ್ಕಳ ವಿಷಯದಲ್ಲಿ ತಮ್ಮ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕಾದುದು ಪ್ರತಿ ತಂದೆ ತಾಯಿಯ ಕರ್ತವ್ಯ.
-ಕೆ.ಬಸವರಾಜ್, ಚೆನ್ನಗಿರಿ
‘ಮಾರ್ಕಂಡೇಯ’ ಮಿನಿಕಥೆ (ವಸುಮತಿ ಉಡುಪ) ಅರ್ಥಪೂರ್ಣವಾಗಿಯೂ ಪ್ರಶ್ನಾರ್ಥಕವಾಗಿಯೂ ಇದೆ.
–ವರಲಕ್ಷ್ಮಿ ಉಡುಪ, ಗೋಪಾಡಿ, ಉಡುಪಿ ಜಿಲ್ಲೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.