ADVERTISEMENT

'ರಾಜ್ಯದಲ್ಲಿ ಬಿಜೆಪಿ ಸರ್ಕಾರ'

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 6:05 IST
Last Updated 20 ನವೆಂಬರ್ 2017, 6:05 IST

ಮುಧೋಳ: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದಿಂದ ಜನರು ರೋಷಿಹೋಗಿದ್ದಾರೆ. ಪ್ರಧಾನಿ ನರೇಮದ್ರ ಮೋದಿ ಅವರ ಜನಪರ ಕಾರ್ಯಗಳನ್ನು ಮೆಚ್ಚಿ ಯುವಕು ಬಿಜೆಪಿ ಸೇರುತ್ತಿರುವುದನ್ನು ನೋಡಿದರೆ ಯಡಿಯೂರಪ್ಪ ನೇತೃತ್ವದಲ್ಲಿ ಮುಂದಿನ ಸರ್ಕಾರವಾಗುವುದು ಖಚಿತ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಗುರುರಾಜ ಕಟ್ಟಿ ಹೇಳಿದರು.

ಅವರು ನಗರದ ವಾರ್ಡ ನಂ.13ರ ಶಿವಾಜಿ ಸರ್ಕಲ್ ಪ್ರಭಾವಿ ನಾಯಕ ಶ್ರೀಕಾಂತ ನ್ಯಾಮಗೌಡ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಪಿಎಂಸಿ ನಿರ್ದೇಶಕ ಅಪ್ಪಾಸಾಹೇಬ ಪವಾರ ಮಾತನಾಡಿ ತಾಲ್ಲೂಕಿ ಹಲವಾರು ಇತರ ಪಕ್ಷದ ಮುಖಂಡರು ಪಕ್ಷದ ನಾಯಕರ ಸಂಪರ್ಕದಲ್ಲಿದ್ದು ಸೂಕ್ತ ಸಮಯದಲ್ಲಿ ಬಿಜೆಪಿ ಸೇರಲಿದ್ದಾರೆ ಎಂದು ಹೇಳಿದರು. ಶಾಸಕ ಗೋವಿಂದ ಕಾರಜೋಳ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಲ್.ಕೆ.ಬಳಗಾನೂರ, ಸುನೀಲ ಘೋರ್ಪಡೆ, ಸುವರ್ಣಪ್ಪ ಕೊಣ್ಣೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT