ಬೆಂಗಳೂರು: ಕೆ.ಆರ್.ಪುರದ ಕೇಂಬ್ರಿಜ್ ತಾಂತ್ರಿಕ ಮಹಾವಿದ್ಯಾಲಯವು ಮೈಕ್ರೊಸಾಫ್ಟ್ ಕಂಪೆನಿಯ ಸಹಯೋಗದಲ್ಲಿ ‘ಅಧ್ಯಾಪನದಲ್ಲಿ ತಂತ್ರಜ್ಞಾನದ ಕುರಿತ ಕಾರ್ಯಾಗಾರ’ ವನ್ನು ಏರ್ಪಡಿಸಲಾಗಿತ್ತು.
ವಾಷಿಂಗ್ಟನ್ ಬೋಥೆಲ್ ವಿವಿಯ ಸಹ ಪ್ರಾಧ್ಯಾಪಕಿ ರಾಬಿನ್ ಎಂಗೊಟ್ ಅವರು ಮಾತನಾಡಿ, ‘ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಹೆಚ್ಚು ಹೆಚ್ಚು ಬಳಸುವುದರಿಂದ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ಅಂತರವನ್ನು ತಗ್ಗಿಸಬಹುದು’ ಎಂದು ಹೇಳಿದರು.
ಮೈಕ್ರೊಸಾಫ್ಟ್ ಇಂಡಿಯಾದ ಸಾರ್ವಜನಿಕ ವಲಯದ ಮುಖ್ಯಸ್ಥ ಅರುಣ್ ರಾಜಾಮಣಿ ಅವರು ಮಾತನಾಡಿ, ‘ಬೋಧನಾ ಕ್ರಮದಲ್ಲಿ ಇಂದು ತಂತ್ರಜ್ಞಾನವನ್ನು ಬಳಸುವುದು ಅಗತ್ಯವಾಗಿದೆ. ಇದರಿಂದ, ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ವಾಗಲಿದೆ. ಅಧ್ಯಾಪಕರು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.