ADVERTISEMENT

ಆಹಾರ ಆಯೋಗಕ್ಕೆ ದೂರು ಕೊಡಲು ಅವಕಾಶ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 19:46 IST
Last Updated 19 ಜುಲೈ 2017, 19:46 IST

ಬೆಂಗಳೂರು: ಆಹಾರ ಇಲಾಖೆ, ಅಂಗನವಾಡಿ ಮತ್ತು ಮಧ್ಯಾಹ್ನದ ಉಪಾಹಾರ ಯೋಜನೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದರೆ ಆಹಾರ ಆಯೋಗಕ್ಕೆ ಸಲ್ಲಿಸಬಹುದು.

ರಾಷ್ಟ್ರೀಯ ಆಹಾರ  ಭದ್ರತಾ ಕಾಯ್ದೆ - 2013ರ ಅಧಿನಿಯಮ 16ರ ಪ್ರಕಾರ, ಸ್ವತಂತ್ರ ಕರ್ನಾಟಕ ರಾಜ್ಯ ಆಹಾರ ಆಯೋಗವು ಸ್ಥಾಪನೆಯಾಗಿದ್ದು, ಆಯೋಗದ ಅಧ್ಯಕ್ಷರಾಗಿ ಡಾ. ಎನ್‌.ಕೃಷ್ಣಮೂರ್ತಿ  ಕಾರ್ಯ ನಿರ್ವಹಿಸುತ್ತಿದ್ದಾರೆ. ಆಯೋಗದ ಸದಸ್ಯರಾಗಿ ವಿ.ಬಿ.ಪಾಟೀಲ್, ಎಚ್.ವಿ. ಶಿವಶಂಕರ, ಡಿ.ಜಿ. ಹಸಬಿ,  ಮಂಜುಳಾ ಮತ್ತು ಬಿ.ಎ. ಮಹಮದ್ ಅಲಿ ನೇಮಕಗೊಂಡಿದ್ದಾರೆ. ಶಾಂತಾ ಎಲ್. ಹುಲ್ಮನಿ ಪದನಿಮಿತ್ತ ಸದಸ್ಯರಾಗಿ ಕಾರ್ಯ ನಿರ್ವಹಿಸುವರು.   ವಿವರಗಳಿಗೆ ಕಚೇರಿಯ ದೂರವಾಣಿ ಸಂಖ್ಯೆ  080 22264966 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT