ADVERTISEMENT

ಕಮಿಷನರ್‌ಗೆ ನಟ ವಿಜಯ್‌ ಮನವಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2014, 19:44 IST
Last Updated 20 ನವೆಂಬರ್ 2014, 19:44 IST

ಬೆಂಗಳೂರು: ‘ನಮ್ಮ ದಾಂಪತ್ಯ ಹಾಳಾಗಲು ಬಿಎಂಟಿಎಫ್‌ ಎಸ್ಪಿ ದೇವರಾಜ್‌ ಅವರು ಕಾರಣ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ನಟ ದುನಿಯಾ ವಿಜಯ್‌ ಅವರು ನಗರ ಪೊಲೀಸ್‌ ಕಮಿಷನರ್‌ ಎಂ.ಎನ್‌.ರೆಡ್ಡಿ ಅವರಿಗೆ ಗುರುವಾರ ಮನವಿ ಮಾಡಿದ್ದಾರೆ.

‘ವಿಜಯ್‌ ಅವರು ದೇವರಾಜ್‌ ವಿರುದ್ಧ ಮೌಖಿಕವಾಗಿ ಆರೋಪ ಮಾಡುತ್ತಿದ್ದಾರೆ. ಆದರೆ, ಅವರು  ಪತ್ನಿಯಿಂದ ದೂರವಾಗಲು ದೇವರಾಜ್‌ ಹೇಗೆ ಕಾರಣ ಎಂಬುದನ್ನು ತಿಳಿಸಿಲ್ಲ.

ಈ ಬಗ್ಗೆ ಸ್ಥಳೀಯ ಠಾಣೆಗೆ ಲಿಖಿತ ದೂರು ಕೊಡುವಂತೆ ಅವರಿಗೆ ಸೂಚಿಸಲಾಗಿದೆ’ ಎಂದು ಎಂ.ಎನ್‌. ರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.