ಬೆಂಗಳೂರು: ಕೊಡಿಗೇಹಳ್ಳಿ ಗೇಟ್ ಬಳಿ ಶನಿವಾರ ರಾತ್ರಿ ಟೆಂಪೊ ಡಿಕ್ಕಿ ಹೊಡೆದು ಮುನಿಪಿಳ್ಳಪ್ಪ (42) ಎಂಬ ಪೇಂಟರ್ ಸಾವನ್ನಪ್ಪಿದ್ದಾರೆ.
ಜಕ್ಕೂರು ಲೇಔಟ್ ನಿವಾಸಿಯಾದ ಮುನಿಪಿಳ್ಳಪ್ಪ, ಕೆಲಸ ಮುಗಿಸಿಕೊಂಡು ರಾತ್ರಿ ಮನೆಗೆ ನಡೆದು ಹೋಗುತ್ತಿದ್ದರು. ಈ ವೇಳೆ ಟೆಂಪೊ ನಿಲುಗಡೆಗೆಂದು ಕೊಡಿಗೇಹಳ್ಳಿ ಗೇಟ್ಗೆ ಬಂದ ಚಾಲಕ ಚೈತನ್ಯ (26), ಮುನಿಪಿಳ್ಳಪ್ಪ ಅವರನ್ನು ಗಮನಿಸದೆ ಹಿಮ್ಮುಖವಾಗಿ ವಾಹನ ಚಾಲನೆ ಮಾಡಿದರು. ಆಗ ಟೆಂಪೊ ಅವರಿಗೆ ಡಿಕ್ಕಿ ಹೊಡೆದಿದ್ದು, ತಲೆಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿತು. ಕೂಡಲೇ ಟೆಂಪೊ ಚಾಲಕನೇ ಗಾಯಾಳುವನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಿದ. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅವರು ಕೆಲ ಹೊತ್ತಿನಲ್ಲೇ ಸಾವನ್ನಪ್ಪಿದರು ಎಂದು ಪೊಲೀಸರು ಹೇಳಿದ್ದಾರೆ.
ಆಂಧ್ರಪ್ರದೇಶ ಮೂಲದ ಚೈತನ್ಯ, ರಾಜ್ಯದಿಂದ ತಂದಿದ್ದ ಸಪೋಟ ಹಣ್ಣಿನ ಮೂಟೆಗಳನ್ನು ಸಿಟಿ ಮಾರುಕಟ್ಟೆಯಲ್ಲಿ ಇಳಿಸಿ ವಾಹನ ನಿಲ್ಲಿಸಲು ಕೊಡಿಗೇಹಳ್ಳಿ ಗೇಟ್ಗೆ ಬಂದಿದ್ದ ಎಂದು ಪೊಲೀಸರು ಹೇಳಿದ್ದಾರೆ. ಯಲಹಂಕ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.