ADVERTISEMENT

ತೊಣಚಿನಕುಪ್ಪೆ ಕೆರೆ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 19:51 IST
Last Updated 20 ಜುಲೈ 2017, 19:51 IST
ಟಿ.ಬಿ.ಜಯಚಂದ್ರ ಕೆರೆಯನ್ನು ವೀಕ್ಷಿಸಿದರು. ಪೆಪ್ಸಿಕೊ ಇಂಡಿಯಾದ ಉಪಾಧ್ಯಕ್ಷೆ ನೀಲಿಮಾ ದ್ವಿವೇದಿ ಇದ್ದಾರೆ
ಟಿ.ಬಿ.ಜಯಚಂದ್ರ ಕೆರೆಯನ್ನು ವೀಕ್ಷಿಸಿದರು. ಪೆಪ್ಸಿಕೊ ಇಂಡಿಯಾದ ಉಪಾಧ್ಯಕ್ಷೆ ನೀಲಿಮಾ ದ್ವಿವೇದಿ ಇದ್ದಾರೆ   

ನೆಲಮಂಗಲ: ಪೆಪ್ಸಿಕೊ ಇಂಡಿಯಾ ಹಾಗೂ ‘ಆಲ್ಟರ್ನೇಟಿವ್‌ ಡೆವಲಪ್‌ಮೆಂಟ್‌’ ಸಂಸ್ಥೆಯ ಆಶ್ರಯದಲ್ಲಿ ಪುನರುಜ್ಜೀವನಗೊಳಿಸಿದ ತಾಲ್ಲೂಕಿನ ತೊಣಚಿನಕುಪ್ಪೆ ಕೆರೆಯನ್ನು ಬೂದಿಹಾಳ್‌ ಗ್ರಾಮ ಪಂಚಾಯಿತಿಗೆ ಗುರುವಾರ ಹಸ್ತಾಂತರಿಸಲಾಯಿತು.

ಸಣ್ಣ ನೀರಾವರಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ‘ಕೆರೆಗಳನ್ನು ಒತ್ತುವರಿ ಮಾಡಿದವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ  ಹೂಡುತ್ತೇವೆ. ಒತ್ತುವರಿ ಬಗ್ಗೆ ಸಾರ್ವಜನಿಕರ ಗಮನಕ್ಕೆ ಬಂದರೆ ಕೂಡಲೇ ದೂರು ನೀಡಬೇಕು. ಜಲಮೂಲಗಳ ಸಂರಕ್ಷಣೆಗೆ  ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ಶಾಸಕ ಡಾ. ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ‘ಕೆರೆಗಳ ಅಭಿವೃದ್ಧಿಯಿಂದ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ’ ಎಂದರು.

ADVERTISEMENT

ಪೆಪ್ಸಿಕೊ ಇಂಡಿಯಾದ ಉಪಾಧ್ಯಕ್ಷ ನಿತೇನ್‌ ಪ್ರಧಾನ್‌, ‘ಸುಸ್ಥಿತ ಜಲ ಸಂಪನ್ಮೂಲ ಅಭಿವೃದ್ಧಿ ಮತ್ತು ನಿರ್ವಹಣೆಯ ಕಾರ್ಯಕ್ರಮದಡಿ ಈ ಕೆರೆಯನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.