ADVERTISEMENT

ನಗರದ ರಸ್ತೆಗಳ ದುಸ್ಥಿತಿ

ರಸ್ತೆ ಗುಂಡಿಗಳ ಚಿತ್ರ ಕಳುಹಿಸಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2015, 19:46 IST
Last Updated 8 ಅಕ್ಟೋಬರ್ 2015, 19:46 IST
ರಸ್ತೆಯಲ್ಲೊಂದು ಕೆರೆ... ಕನಕಪುರ ರಸ್ತೆಯ ಬನಶಂಕರಿಯಲ್ಲಿ ಕಂಡ  ನೋಟ ಇದು         -ಪ್ರಜಾವಾಣಿ ಚಿತ್ರ
ರಸ್ತೆಯಲ್ಲೊಂದು ಕೆರೆ... ಕನಕಪುರ ರಸ್ತೆಯ ಬನಶಂಕರಿಯಲ್ಲಿ ಕಂಡ ನೋಟ ಇದು -ಪ್ರಜಾವಾಣಿ ಚಿತ್ರ   

ಮಾನ್ಯತಾ ಟೆಕ್‌ ಪಾರ್ಕ್ ಹಿಂಭಾಗದ ವೀರಣ್ಣ ಪಾಳ್ಯ ಜಂಕ್ಷನ್‌ಗೆ ಹೋಗುವ ರಸ್ತೆಯಿದು. ‘ಬಿಬಿಎಂಪಿ ಇದನ್ನು ರಸ್ತೆ ಎಂದುಕೊಂಡರೂ ನಾವು ಮಾತ್ರ ಗದ್ದೆ ಎಂದೇ ಕರೆಯುವುದು’ ಎನ್ನುತ್ತಾರೆ ಚಿತ್ರ ಕಳುಹಿಸಿದ ಎಂ.ರಾಜ್‌ಕುಮಾರ್‌. ವೀರಣ್ಣ ಜಂಕ್ಷನ್‌ ತಲುಪಲು ವೋಲ್ವೊ ಬಸ್‌ ಸೇರಿದಂತೆ ಎಲ್ಲ ವಾಹನಗಳು ಇದೇ ರಸ್ತೆಯನ್ನು ಬಳಸುತ್ತವೆ. ಟ್ರ್ಯಾಕ್ಟರ್‌ಗಳನ್ನು ರಸ್ತೆಯಲ್ಲೇ  ತೊಳೆಯಲಾಗುತ್ತಿದ್ದು, ಮಳೆ ಬಾರದಿದ್ದರೂ ಕೆಸರು ಹಾಗೇ ಇರುವಂತೆ ನೋಡಿಕೊಳ್ಳಲಾಗುತ್ತದೆ. ಸಚಿವ ರಾಮಲಿಂಗಾ ರೆಡ್ಡಿ ಅವರು ನಮ್ಮ ರಸ್ತೆಯನ್ನು ನೋಡಲು ಯಾವಾಗ ಬರುವರೋ ಎಂದು ಕಾಯುತ್ತಿದ್ದೇವೆ ಎನ್ನುತ್ತಾರೆ ರಾಜ್‌ಕುಮಾರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.