ADVERTISEMENT

ಬಾನಾಡಿ ಮರಳಿ ಬಾ ಯಡಿಯೂರಿಗೆ!

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 19:59 IST
Last Updated 23 ಮಾರ್ಚ್ 2017, 19:59 IST
ಮೇಯರ್‌ ಜಿ.ಪದ್ಮಾವತಿ ಅವರು ಪಾರಿವಾಳ ಹಾರಿಬಿಡುವ ಮೂಲಕ ಯೋಜನೆಗೆ ಚಾಲನೆ ನೀಡಿದರು. (ಎಡದಿಂದ) ನಟಿ ಸಂಯುಕ್ತ ಹೊರನಾಡು, ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್‌ ಹಾಗೂ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತ್‌ಕುಮಾರ್‌ ಇದ್ದಾರೆ  –ಪ್ರಜಾವಾಣಿ ಚಿತ್ರ
ಮೇಯರ್‌ ಜಿ.ಪದ್ಮಾವತಿ ಅವರು ಪಾರಿವಾಳ ಹಾರಿಬಿಡುವ ಮೂಲಕ ಯೋಜನೆಗೆ ಚಾಲನೆ ನೀಡಿದರು. (ಎಡದಿಂದ) ನಟಿ ಸಂಯುಕ್ತ ಹೊರನಾಡು, ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್‌ ಹಾಗೂ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತ್‌ಕುಮಾರ್‌ ಇದ್ದಾರೆ –ಪ್ರಜಾವಾಣಿ ಚಿತ್ರ   
ಬೆಂಗಳೂರು: ಕಿಂಗ್‌ಫಿಷರ್‌, ಗ್ರೇ ಶ್ರೈಕ್‌, ಗೋಲ್ಡನ್‌ ಓರಿಯಲ್‌, ಪರ್ಪಲ್‌ ಮೊರೇನ್‌, ರೋಜಿ ಸ್ಟಾರ್ಲಿಂಗ್‌, ಸನ್‌ಬರ್ಡ್‌, ಪೆಲಿಕಾನ್‌, ಜಕಾನಾ, ಗುಬ್ಬಚ್ಚಿ, ಮುನಿಯಾ, ನೀರುಕೋಳಿ, ಬಾತುಕೋಳಿ, ಕೊಕ್ಕರೆ, ಹದ್ದು ಸೇರಿದಂತೆ ಹತ್ತಾರು ಪ್ರಭೇದದ ಪಕ್ಷಿಗಳನ್ನು ನೋಡಲು ನಗರದ ನಾಗರಿಕರು ಪಕ್ಷಿಧಾಮಕ್ಕೆ ಹೋಗಬೇಕಿಲ್ಲ. 
 
ನಗರದಲ್ಲಿನ ಯಡಿಯೂರು ಕೆರೆಯನ್ನು ಈ ಹಕ್ಕಿಗಳು ಆವಾಸ ಸ್ಥಾನ ಮಾಡಿಕೊಂಡಿವೆ. ಕೆರೆಯನ್ನು ಪಕ್ಷಿಧಾಮವಾಗಿಸಲು ಬಿಬಿಎಂಪಿ ‘ಬಾನಾಡಿ ಮರಳಿ ಬಾ ಗೂಡಿಗೆ’ ಯೋಜನೆ ಅನುಷ್ಠಾನಗೊಳಿಸಿದೆ. 
 
₹ 25 ಲಕ್ಷ ವೆಚ್ಚದಲ್ಲಿ ಪಕ್ಷಿಗಳ ಆಹಾರ ಮತ್ತು ಆವಾಸಕ್ಕೆ ಬೇಕಾದ ಅನುಕೂಲತೆಗಳನ್ನು ಕೆರೆಯ ಪರಿಸರದಲ್ಲಿ ಕಲ್ಪಿಸಲಾಗಿದೆ. ಪಕ್ಷಿಗಳ ವಾಸಕ್ಕಾಗಿ ವಿಶೇಷ ಗೋಡೆಯೊಂದನ್ನು ಕಟ್ಟಲಾಗಿದೆ.  

ಮರಿಗಳನ್ನು ಪೋಷಿಸಲು ಅದರಲ್ಲಿ ಹತ್ತಾರು ಕೃತಕ ಪೊಟರೆಗಳನ್ನು ನಿರ್ಮಿಸಲಾಗಿದೆ. ಇದರೊಂದಿಗೆ ಪೊಟರೆಗಳುಳ್ಳ 2 ಗೋಪುರಗಳನ್ನು ನಿರ್ಮಿಸಲಾಗಿದೆ.
 
ಸಂತಾನ ವೃದ್ಧಿಗಾಗಿ ಶ್ರೀಲಂಕಾ, ನೇಪಾಳ, ಹಿಮಾಲಯ, ಕಾಶ್ಮೀರದಿಂದ ಹಕ್ಕಿಗಳು ವಲಸೆ ಬರುತ್ತಿವೆ. ಕೆರೆಯ ದಡದಲ್ಲಿ  ನಿರ್ಮಿಸಿರುವ ದೊಡ್ಡ ಪಂಜರಗಳಲ್ಲಿ ಗಿಳಿ, ಪಾರಿವಾಳ ಮತ್ತು ಮೊಲಗಳನ್ನು ಇರಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.