ADVERTISEMENT

ವಿದ್ಯುತ್‌ ಅವಘಡ ತಡೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2014, 20:08 IST
Last Updated 15 ಸೆಪ್ಟೆಂಬರ್ 2014, 20:08 IST

ಬೆಂಗಳೂರು: ಉತ್ಸವ, ಮೆರವಣಿಗೆ­ಗಳ ಸಂದರ್ಭದಲ್ಲಿ ವಿದ್ಯುತ್‌ ತಂತಿ ತಗುಲಿ ಅವಘಡಗಳು ಸಂಭವಿಸುವು­ದನ್ನು ತಡೆಯಲು ಮೂರ್ತಿ ಹಾಗೂ ಹಿಂಭಾಗದ ಅಲಂಕಾರ ಫಲಕಗಳ ಎತ್ತರಕ್ಕೆ ಮಿತಿ ವಿಧಿಸಲಾಗುವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.

‘ಈಗ ಗಣೇಶೋತ್ಸವ. ರಥೋ­ತ್ಸವ ಮತ್ತಿತರ ಮೆರವಣಿಗೆಗಳಲ್ಲಿ ಬಳಸುವ ಮೂರ್ತಿ, ಅಲಂಕಾರ ಫಲಕಗಳಿಗೆ ಮಿತಿ ಇಲ್ಲ. ಇದರಿಂದಾಗಿ ಅವಘಡಗಳು ಸಂಭವಿಸುತ್ತಿವೆ. ಹತ್ತು ಅಡಿ ಎತ್ತರ ಮಿತಿ ವಿಧಿಸುವ ಯೋಚನೆ ಇದೆ. ಪೊಲೀಸ್‌ ಇಲಾಖೆ ಜೊತೆ ಚರ್ಚಿಸಿದ ಬಳಿಕ ತೀರ್ಮಾನಿಸಲಾಗುವುದು’ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.