ADVERTISEMENT

ವಿಧಾನಸೌಧದ ವಜ್ರ ಮಹೋತ್ಸವ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 20:37 IST
Last Updated 22 ಸೆಪ್ಟೆಂಬರ್ 2017, 20:37 IST
ವಿಧಾನಸೌಧದ ವಜ್ರ ಮಹೋತ್ಸವ ಮುಂದೂಡಿಕೆ
ವಿಧಾನಸೌಧದ ವಜ್ರ ಮಹೋತ್ಸವ ಮುಂದೂಡಿಕೆ   

ಬೆಂಗಳೂರು: ಇದೇ ಅ. 6 ಮತ್ತು 7ರಂದು ನಡೆಸಲು ಉದ್ದೇಶಿಸಿದ್ದ ವಿಧಾನಸೌಧದ ವಜ್ರ ಮಹೋತ್ಸವವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಅವರು ಲಭ್ಯ ಇಲ್ಲದಿರುವುದರಿಂದ ಮುಂದೂಡಲಾಗಿದೆ.

ವಿಧಾನಸಭಾ ಅಧ್ಯಕ್ಷ ಕೆ.ಬಿ. ಕೋಳಿವಾಡ ಮತ್ತು ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಅವರು ಶುಕ್ರವಾರ ಕೋವಿಂದ್‌ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಸಮಾರಂಭಕ್ಕೆ ಆಹ್ವಾನಿಸಬೇಕಿತ್ತು.

‘ರಾಷ್ಟ್ರಪತಿ ಮಹಾರಾಷ್ಟ್ರಕ್ಕೆ ತೆರಳಿರುವ ಮಾಹಿತಿ ಮೊದಲೇ ಸಿಕ್ಕಿದ್ದರಿಂದ ಕೋಳಿವಾಡ ದೆಹಲಿ ಪ್ರವಾಸ ರದ್ದುಗೊಳಿಸಿದರು. ಆದರೆ, ನಾನು ವೈಯಕ್ತಿಕ ಕೆಲಸ ಇದ್ದುದರಿಂದ ದೆಹಲಿಗೆ ಹೋಗಿದ್ದೆ. ರಾಷ್ಟ್ರಪತಿ ಭಾಗವಹಿಸಲು ಅನುಕೂಲವಿರುವ ದಿನ ತಿಳಿದುಕೊಂಡು ವಜ್ರಮಹೋತ್ಸವ ಆಚರಣೆಯ ದಿನ ನಿಗದಿಪಡಿಸಲಾಗುವುದು’ ಎಂದು ಡಿ.ಎಚ್‌. ಶಂಕರಮೂರ್ತಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.