ADVERTISEMENT

ಸಿಗರೇಟು ತರದಿದ್ದಕ್ಕೆ ಆಟೊ ಚಾಲಕನ ಹತ್ಯೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2017, 20:08 IST
Last Updated 9 ಏಪ್ರಿಲ್ 2017, 20:08 IST
ಬೆಂಗಳೂರು: ಹಳೇ ಬಾಗಲೂರು ಲೇಔಟ್‌ನಲ್ಲಿ ಶನಿವಾರ ರಾತ್ರಿ ಸಿಗರೇಟು ತರಲಿಲ್ಲವೆಂಬ ಕಾರಣಕ್ಕೆ ಮೂವರು ಆಟೊ ಚಾಲಕರು, ಮೊಹಮದ್ ಅಲಿ (30) ಎಂಬುವರನ್ನು ಹತ್ಯೆಗೈದಿದ್ದಾರೆ.
 
ಘಟನೆ ನಂತರ ತಲೆಮರೆಸಿಕೊಂಡಿರುವ ವಾಹಿದ್, ಮುಬಾರಕ್ ಹಾಗೂ ಮುಜಾಹಿರ್ ಅವರ ಬಂಧನಕ್ಕೆ ಕಾಡುಗೊಂಡನಹಳ್ಳಿ ಪೊಲೀಸರು ಬಲೆ ಬೀಸಿದ್ದಾರೆ. 
 
‘ಮೊಹಮದ್ ಕೂಡ ಆಟೊ ಚಾಲಕರಾಗಿದ್ದು, ಬಾಗಲೂರು ಲೇಔಟ್‌ನಲ್ಲಿ ನೆಲೆಸಿದ್ದರು. ರಾತ್ರಿ 1.30ರ ಸುಮಾರಿಗೆ ಇವರೆಲ್ಲ ನಿಲ್ದಾಣದಲ್ಲಿ ಆಟೊಗಳನ್ನು ನಿಲ್ಲಿಸಿಕೊಂಡು ಮಾತನಾಡುತ್ತಿದ್ದರು. ಈ ವೇಳೆ ಮೊಹಮದ್‌ ಅವರಿಗೆ ಸಿಗರೇಟು ತರುವಂತೆ ಆರೋಪಿಗಳು, ಹೇಳಿದ್ದರು’ ಎಂದು ಪೊಲೀಸರು ಹೇಳಿದರು. 
 
‘ಅದಕ್ಕೆ ಅವರು ಒಪ್ಪದಿದ್ದಾಗ ಆರೋಪಿಗಳು ಜಗಳ ಪ್ರಾರಂಭಿಸಿದ್ದಾರೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಆಗ ಅವರು ಬೆನ್ನಿಗೆ ಚಾಕು ಇರಿದು ಪರಾರಿಯಾಗಿದ್ದಾರೆ. ಸ್ಥಳೀಯರ ಹೇಳಿಕೆ ಆಧರಿಸಿ ಹಂತಕರ ಗುರುತು ಪತ್ತೆ ಹಚ್ಚಿದ್ದೇವೆ. ಅವರ ಬಂಧನಕ್ಕೆ ಎರಡು ವಿಶೇಷ ತಂಡಗಳನ್ನು ರಚಿಸಿದ್ದೇವೆ’ ಎಂದು ಮಾಹಿತಿ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.