ಕೆಂಗೇರಿ: ‘ಇಡೀ ಪ್ರಪಂಚದಲ್ಲಿನ ರಂಗಭೂಮಿಕೆಯಲ್ಲಿ ಗ್ರೀಕ್ ದೇಶವೊಂದನ್ನು ಹೊರತುಪಡಿಸಿದರೆ ರಂಗಭೂಮಿಗೆ ಭಾರತದ ಸಂಸ್ಕತಿಯೇ ಆದರ್ಶ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಯೋಗ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ನಾಗೇಶ್ ವಿ. ಬೆಟ್ಟಕೋಟೆ ಹೇಳಿದರು.
ನಾಟ್ಯ ಸರಸ್ಪತಿ ಶಾಂತಲಾ ಕಲಾ ಸಂಘದ ವತಿಯಿಂದ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ನಡೆದ ಎರಡು ದಿನಗಳ ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
‘ನಮ್ಮ ನೆಲದ ರಂಗಸಜ್ಜಿಕೆಗೆ ಅಪೂರ್ವ ಹಿನ್ನೆಲೆ ಇರುವುದರಿಂದಲೇ, ವಿದೇಶಿ ವಿದ್ವಾಂಸರೆಲ್ಲರಿಗೆ ಭಾರತದ ಕಲೆಯೇ ಸಂಶೋಧನಾ ವಸ್ತುವಾಗಿದೆ. ಇದಕ್ಕೆ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದೆ. ಮುಂಬರುವ ಪೀಳಿಗೆಗೆ ನಮ್ಮ ಕಲೆ, ಸಾಹಿತ್ಯ, ಸಂಗೀತ, ಜನಪದದ ಪರಿಚಯ ಮಾಡಿ ನಮ್ಮ ಸಂಸ್ಕತಿಯನ್ನು ಉಳಿಸಬೇಕಾಗಿದೆ’ ಎಂದರು.
ಸಮಾಜಸೇವಕ ಕೆ.ಸಿ. ಬೆಟ್ಟಸ್ವಾಮಿಗೌಡ, ‘ನಾಟಕ ಜನಪದಗಳಲ್ಲಿ ನೀತಿಯಿರುತ್ತದೆ. ಇವುಗಳನ್ನು ಪೋಷಿಸುವುದರಿಂದ ನಮ್ಮ ಸಂಸ್ಕತಿಯನ್ನು ಕಾಪಾಡಿದಂತೆ. ಇದು ನಮ್ಮ ಅಳಿಸಲಾರದ ಸಂಪತ್ತು’ ಎಂದರು.
ಅಮರೇಶ್ವರ ನಾಟಕ ಮಂಡಳಿಯ ಸ್ಥಾಪಕ ಹಿರಿಯ ರಂಗಕರ್ಮಿ ಗುಬ್ಬಿ ಚನ್ನಬಸವಯ್ಯನವರನ್ನ ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.