ಬಸವಕಲ್ಯಾಣ: ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಇಲ್ಲಿನ ಉಪನ್ಯಾಸಕ ದೀಪಕ ಮಾಲಗಾರ ಅವರನ್ನು ಘೋಷಿಸಲಾಗಿದೆ.
ಬೆಂಗಳೂರಿನಲ್ಲಿ ಮಂಗಳವಾರ ನಡೆದ ಪಕ್ಷದ ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಪಂಕಜ್ ಗುಪ್ತಾ ಮತ್ತು ರಾಜ್ಯಸಭಾ ಸದಸ್ಯ ಸಂಜಯ ಸಿಂಗ್ ಅವರು ದೀಪಕ ರವರ ಹೆಸರನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ದೀಪಕ ಇಲ್ಲಿನ ನಗರಸಭೆ ಉಪಾಧ್ಯಕ್ಷೆ ಚಮಾಬಾಯಿ ಮಾಲಗಾರ ಅವರ ಪುತ್ರರಾಗಿದ್ದು ಮತ್ತು ಬೆಂಗಳೂರಿನ ಕಾಲೇಜಿನಲ್ಲಿ ಎಂ.ಟೆಕ್ ಪದವಿ ಪಡೆದು ಉಪನ್ಯಾಸಕರಾಗಿದ್ದಾರೆ. ಎರಡು ವರ್ಷದಿಂದ ಪಕ್ಷದ ಜಿಲ್ಲಾ ಸಂಚಾಲಕರಾಗಿದ್ದಾರೆ.
`ಬಸವಾದಿ ಶರಣರ ನಾಡಿನಲ್ಲಿ ಸಮಾನತೆ, ಸಹೋದರತ್ವ, ಶಾಂತಿ ವಾತಾವರಣಕ್ಕಾಗಿ ಪ್ರಯತ್ನಿ ಸಲಾಗುವುದು. ಭ್ರಷ್ಟಾಚಾರ ರಹಿತ ಅಭಿವೃದ್ಧಿ ಸಹಿತ ಆಡಳಿತ ನೀಡುವುದು ಎಎಪಿ ಮುಖ್ಯ ಗುರಿಯಾಗಿದೆ. ಅದಕ್ಕಾಗಿ ಪ್ರಯತ್ನಿಸುತ್ತೇನೆ. ಯುವಪಡೆಯಿಂದ ನನಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ’ ಎಂದು ಅಭ್ಯರ್ಥಿಯಾಗಿರುವ ದೀಪಕ ಮಾಲಗಾರ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.