ADVERTISEMENT

ಸಚಿವ ಸ್ಥಾನ: ಕಾರ್ಯಕರ್ತರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 7:08 IST
Last Updated 2 ಸೆಪ್ಟೆಂಬರ್ 2017, 7:08 IST

ಗುಂಡ್ಲುಪೇಟೆ: ಶಾಸಕಿ ಮೋಹನ್‌ಕುಮಾರಿ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವುದಕ್ಕೆ ತಾಲ್ಲೂಕಿನ ಕಾಂಗ್ರೆಸ್‌ ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ.
ಮಹದೇವಪ್ರಸಾದ್‌ ಅವರ ಬಳಿಕ ಕ್ಷೇತ್ರದಿಂದ ಮತ್ತೊಬ್ಬರು ಸಚಿವರಾಗುತ್ತಿರುವುದು ಅವರ ಬೆಂಬಲಿಗರಲ್ಲಿ ಹರ್ಷ ಉಂಟುಮಾಡಿದ್ದು, ತಾಲ್ಲೂಕಿನ ವಿವಿಧೆಡೆ ಬೆಂಬಲಿಗರು ಶುಕ್ರವಾರ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ತಾಲ್ಲೂಕಿನಲ್ಲಿನ ಪಕ್ಷದ ಪ್ರಮುಖ ಮುಖಂಡರು ಮತ್ತು ಕಾರ್ಯಕರ್ತರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಬೆಂಗಳೂರು ತೆರಳಿದ್ದರಿಂದ ತಾಲ್ಲೂಕು ಕೇಂದ್ರದಲ್ಲಿ ಸಂಭ್ರಮಾಚರಣೆಯ ತೀವ್ರತೆ ಕಡಿಮೆ ಇತ್ತು. ಕೆಲವೆಡೆ ಬೆರಳಣಿಕೆಯಷ್ಟು ಜನರ ಗುಂಪು ಪಟಾಕಿ ಸಿಡಿಸಿ, ಮೋಹನ್‌ಕುಮಾರಿ ಅವರ ಪರ ಘೋಷಣೆ ಕೂಗಿದರು. ಅಂಗಡಿ ಮುಂಗಟ್ಟುಗಳಲ್ಲಿ ರಾಜಕೀಯದ ಕುರಿತ ಚರ್ಚೆ ನಡೆಯುತ್ತಿದ್ದದ್ದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT