ADVERTISEMENT

ಜ.4ರಿಂದ ನೋಳಂಬೋತ್ಸವ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2017, 7:21 IST
Last Updated 28 ಡಿಸೆಂಬರ್ 2017, 7:21 IST
ಜ.4ರಿಂದ ನೋಳಂಬೋತ್ಸವ
ಜ.4ರಿಂದ ನೋಳಂಬೋತ್ಸವ   

ಚಿಕ್ಕಮಗಳೂರು: ನಗರದ ಗುರುಸಿದ್ದರಾ ಮೇಶ್ವರ ವಿದ್ಯಾಸಂಸ್ಥೆ ಆವರಣದಲ್ಲಿ ಜ.4ರಂದು ಬೆಳಿಗ್ಗೆ 11 ಗಂಟೆಗೆ ನೋಳಂಬೋತ್ಸವ ಜರುಗಲಿದೆ.

ತಿಪಟೂರು ತಾಲ್ಲೂಕು ಭೂಸುಕ್ಷೇತ್ರ ಮಠದ ಗುರುಪರದೇಶಿ ಕೇಂದ್ರ ಸ್ವಾಮೀಜಿ ಉದ್ಘಾಟಿಸುವರು. ಕರಡಿಗವಿ ಮಠದ ಶಂಕರಾನಂದ ಸ್ವಾಮೀಜಿ, ಗವಿಮಠದ ಚಂದ್ರಶೇಖರ ಸ್ವಾಮೀಜಿ, ದಾರುಕ ಸಂಸ್ಥಾನ ಮಠದ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ, ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ, ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ, ಯಳನಡು ಮಠದ ಜ್ಞಾನ ಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀ ಜಿ, ಮಾರಗೊಂಡನಹಳ್ಳಿ ಮಠದ ಪ್ರಭುಚೆನ್ನಬಸವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಎ.ಎಸ್.ಸದಾಶಿವಯ್ಯ, ಎಂ.ಪಿ.ವಿಶ್ವ ನಾಥಯ್ಯ, ಎಸ್.ಟಿ.ಚಂದ್ರ ಶೇಖರಪ್ಪ, ಚಂದ್ರಯ್ಯ ಪಾಲ್ಗೊಳ್ಳುವರು.

ADVERTISEMENT

ಸಮಾರಂಭಕ್ಕೆ ಮುನ್ನ ಕಲಾ ತಂಡಗಳು ಮತ್ತು ನೊಳಂಬ ಸಮಾ ಜದ ಇತಿಹಾಸ ಬಿಂಬಿಸುವ ಸ್ತಬ್ದ ಚಿತ್ರಗಳೊಂದಿಗೆ ಮೆರವಣಿಗೆ ನಡೆಸಲಾಗುವುದು ಎಂದು ಪ್ರಚಾರ ಸಮಿತಿ ಅಧ್ಯಕ್ಷ ಸಿ.ಸಿ.ಸಂತೋಷ್ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.