ADVERTISEMENT

ಪ್ರಧಾನಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ

ಮೂಡಿಗೆರೆ: ರಾಷ್ಟ್ರೀಯ ಯುವ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 5:40 IST
Last Updated 16 ಜನವರಿ 2017, 5:40 IST
ಪ್ರಧಾನಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ
ಪ್ರಧಾನಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ   

ಮೂಡಿಗೆರೆ: ತಾಲ್ಲೂಕಿನ ಗೋಣಿಬೀಡು ಆಂಜನೇಯ ದೇವಾಲಯದಲ್ಲಿ ಗುರು ವಾರ ರಾಷ್ಟ್ರೀಯ ಯುವ ದಿನದ ಅಂಗವಾಗಿ ಪ್ರಧಾನಿ ನರೇಂದ್ರಮೋದಿ ಹೆಸರಿನಲ್ಲಿ ವಿಶೇಷ ಪೂಜೆ ನಡೆಸ ಲಾಯಿತು.

ದೇವಾಲಯದಲ್ಲಿರುವ ಆಂಜನೇಯ ಹಾಗೂ ಕೇಶವ ದೇವರಿಗೆ ದೇವಾಲ ಯದ ಅರ್ಚಕ ಜನಾರ್ದನ್‌ಭಟ್‌ ನೇತೃತ್ವದಲ್ಲಿ ಪಂಚಾರಾತ್ರಗಮ ಮಾದರಿ ಯಲ್ಲಿ ವಿವಿಧ ಅಭಿಷೇಕ ನಡೆಸಿ, ಆಕರ್ಷಕ ಅಲಂಕಾರಗೊಳಿಸಿ, ರಾಷ್ಟ್ರೀಯ ಯುವ ದಿನದ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಅರ್ಚನೆ ನಡೆಸಿಸಲಾಯಿತು.

ಮೋದಿ ಅವರಿಗೆ ದೀರ್ಘಾಯುಷ್ಯ ನೀಡುವಂತೆ ಪ್ರಾರ್ಥಿಸಿ ಹೋಮ ಹವನಗಳನ್ನು ಸಲ್ಲಿಸಲಾಯಿತು.  ದೇವಾಲಯ ಸಮಿತಿ ಅಧ್ಯಕ್ಷ ಜಗನ್ನಾಥ್‌, ಭಜನೆ ಮಂಡಳಿ ಸದಸ್ಯರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಪೂಜಾ ಕೈಂಕರ್ಯದಲ್ಲಿ ಉಪಸ್ಥಿತರಿದ್ದರು. ವಿಶೇಷ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.