ಜಯಪುರ (ಬಾಳೆಹೊನ್ನೂರು): ಭಾರತೀಯ ಅಯ್ಯಪ್ಪ ಸ್ವಾಮಿ ಸೇವಾ ಸಂಘ ಶಬರಿಮಲೆಯಲ್ಲಿ ಇದೇ 22ರ ವರೆಗೆ ಹಮ್ಮಿಕೊಂಡಿರುವ ಸ್ವಚ್ಛತಾ ಅಂದೋಲನಕ್ಕೆ ಕೊಪ್ಪ ತಾಲ್ಲೂಕಿನ ಮೇಗುಂದದ ಹೋಬಳಿಯಿಂದ 40 ಜನ ಸ್ವಯಂ ಸೇವಕರ ತಂಡ ಶೃಂಗೇರಿಗೆ ತೆರಳಿ ಶಾರದಾಂಬ ದೇವಿಯ ದರ್ಶನ ಪಡೆದು ಶನಿವಾರ ತೆರಳಿದರು.
ತಂಡದ ನೇತೃತ್ವವನ್ನು ಲೋಕನಾಥ ಪುರದ ಮಧುರಾಜ್ ವಹಿಸಿದ್ದು, ಜಯಪುರದ ರಂಗಶ್ರೀ ರಮೇಶ್, ಪ್ರಸನ್ನಕುಮಾರ್ ಕಿಬ್ಳಿ, ಅಮ್ಮಡಿ ಚಂದ್ರಶೇಖರ್, ರತ್ನಾಕರ್, ಕೃಷ್ಣಪ್ಪ ಸೇರಿದಂತೆ ಹಲವರು ಅವರೊಂದಿಗೆ ತೆರಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.