ADVERTISEMENT

ಆಳ್ವಾಸ್ ನುಡಿಸಿರಿಯಲ್ಲಿ ಅಭಯಾಕ್ಷರ ಅಭಿಯಾನ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 4:29 IST
Last Updated 4 ಡಿಸೆಂಬರ್ 2017, 4:29 IST

ಮೂಡುಬಿದಿರೆ: ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ನಡೆದ ಆಳ್ವಾಸ್ ನುಡಿಸಿರಿಯಲ್ಲಿ ಭಾರತೀಯ ಗೋಪರಿವಾರದ ಗೋಕಿಂಕರ ನೇತೃತ್ವದಲ್ಲಿ ‘ಅಭಯಾಕ್ಷರ ಅಭಿಯಾನ’ ನೆರವೇರಿತು. ಭಾರತೀಯ ಗೋತಳಿ ರಕ್ಷಣೆಗಾಗಿ ಸಹಿ ಸಂಗ್ರಹಕ್ಕೆ ಒಂದು ಮಳಿಗೆಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯ ಕಟ್ಟಡದಲ್ಲಿ ತೆರೆಯಲಾಗಿತ್ತು.

ಮತ್ತೊಂದು ಮಳಿಗೆಯನ್ನು ಕೃಷಿಸಿರಿಯಲ್ಲಿ ತೆರೆಯಲಾಗಿತ್ತು. ಭಾರತೀಯ ಗೋವಂಶದ ಕಾಂಕ್ರೇಜ್ ತಳಿಯ ಎತ್ತರದ ಎತ್ತುಗಳ ನಡುವೆಯೇ ನಿಂತು ಸಹಿ ಸಂಗ್ರಹಿಸಿದ್ದು ಗಮನ ಸೆಳೆಯಿತು.

ಸುಮಾರು 25ಕಾರ್ಯಕರ್ತರಿಂದ ಆರಂಭಗೊಂಡ ಅಭಿಯಾನ ಮೂರು ದಿನವೂ ನಡೆಯಿತು. ಹೊಸನಗರ ರಾಮಚಂದ್ರಾಪುರ ಮಠದ ಅಂಗಸಂಸ್ಥೆ ಯಾದ ನಂತೂರಿನ ಶ್ರೀ ಭಾರತೀ ಪದವಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಗೋಕಿಂಕರರು ಈ ಅಭಿಯಾ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.