ADVERTISEMENT

ಸಾರಾಯಿ ಅಂಗಡಿ ತೆರವಿಗೆ ಗಡುವು

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 5:35 IST
Last Updated 21 ಜನವರಿ 2017, 5:35 IST
ಸಾರಾಯಿ ಅಂಗಡಿ ತೆರವಿಗೆ ಗಡುವು
ಸಾರಾಯಿ ಅಂಗಡಿ ತೆರವಿಗೆ ಗಡುವು   

ಕುಂದಗೋಳ: ತಾಲ್ಲೂಕಿನ ಹೊಸಕಟ್ಟಿ ಗ್ರಾಮದ ಗೋಮಾಳ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡು ಅಕ್ರಮವಾಗಿ ಸಾರಾಯಿ ಮಾರಾಟ ಮಾಡಲಾಗುತ್ತಿದೆ. ಇದನ್ನು ಕೂಡಲೇ ತಡೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಘಟಕದ ವತಿಯಿಂದ ಶುಕ್ರವಾರ ಇಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ನಾಲ್ಕು ವರ್ಷಗಳಿಂದ ಸಾರಾಯಿ ಮುಕ್ತವಾಗಿದ್ದ ಗ್ರಾಮದಲ್ಲಿ ಇದೀಗ ಅವ್ಯಾಹತವಾಗಿ ಸಾರಾಯಿ ಮಾರಾಟ ನಡೆಯುತ್ತಿದೆ. ಇದರಿಂದ ಈ ಮಾರ್ಗವಾಗಿ ಸಂಚರಿಸುವ ಮಹಿಳೆಯರು ಹಾಗೂ ಮಕ್ಕಳಿಗೆ ತೊಂದರೆಯಾಗುತ್ತಿದೆ. ಒಂದು ವಾರದೊಳಗಾಗಿ ಅಂಗಡಿ ತೆರವುಗೊಳಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ವೇದಿಕೆಯ ಅಧ್ಯಕ್ಷ ಕಲ್ಲಪ್ಪ ಹರಕುಣಿ ಎಚ್ಚರಿಸಿದರು.

ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನೆಡೆಸಿ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ತಹಶೀಲ್ದಾರ ಮಹದೇವ ಬಣಸಿ, ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ ಮೇಲೆ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು. ಅಡಿವೆಪ್ಪ ಹೆಬಸೂರ, ಅಶೋಕ ಸಂಶಿ, ಶಿವಾನಂದ ಮಲ್ಲಿಗವಾಡ, ಅಡಿವೆಪ್ಪ ತಳವಾರ, ಅರುಣ ಪಾಟೀಲ, ರಮೇಶ ಅಣ್ಣಿಗೇರಿ, ಈರಪ್ಪ ಮಲ್ಲಿಗವಾಡ, ಬಿ.ಬಿ.ವಾಲೀಕಾರ, ಎಂ.ವಿ.ಹಿರೇಮಠ, ನಿಂಗಪ್ಪ ಅಮರಗೋಳ, ಟಿ.ಎಸ್.ಕಮತರ, ನಿರ್ಮಲಾ, ಚನ್ನವ್ವ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.