ADVERTISEMENT

ಕ್ಷಯರೋಗ ಪತ್ತೆ ಆಂದೋಲನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 10:20 IST
Last Updated 7 ಡಿಸೆಂಬರ್ 2017, 10:20 IST

ರೋಣ: ಪಟ್ಟಣದ ಬಾಬು ಜಗಜೀವನರಾಂ ನಗರದಲ್ಲಿ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮಕ್ಕೆ ಪುರಸಭೆ ಅಧ್ಯಕ್ಷ ಶಿವಪ್ಪ ಕರಿಲಿಂಗಣ್ಣವರ ಚಾಲನೆ ನೀಡಿದರು.

ಡಾ.ಎಂ.ಬಿ.ಪಾಟೀಲ ಮಾತನಾಡಿ, ಕ್ಷಯರೋಗ ಸೋಂಕಿತ ವ್ಯಕ್ತಿ ಸೂಕ್ತ ಚಿಕಿತ್ಸೆ ಪಡೆಯದೇ ಇದ್ದರೆ, ಆತನ ಶರೀರದಲ್ಲಿ ರೋಗಾಣುಗಳು ಉಲ್ಬಣಗೊಂಡು ಆತ ಕೆಮ್ಮಿದಾಗ ಅಥವಾ ಸೀನಿದಾಗ ಹೊರ ವಾತಾವರಣಕ್ಕೆ ಸೇರಿ ಆರೋಗ್ಯವಂತ ವ್ಯಕ್ತಿಗೂ ರೋಗ ಹರಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ ಮಾತನಾಡಿ, ಕ್ಷಯ ರೋಗದ ಚಿಕಿತ್ಸೆ, ಮುನ್ನೆಚ್ಚರಿಕೆಗಲ ಕುರಿತು ಮಾಹಿತಿ ನೀಡಿದರು.

ADVERTISEMENT

ಸಂಪನ್ಮೂಲ ವ್ಯಕ್ತಿ ಉಮೇಶ ಕಣವಿ ಮಾತನಾಡಿ, ರೋಣ ತಾಲ್ಲೂಕಿನಲ್ಲಿ ಕ್ಷಯರೊಗ ಹರಡುವ ಸಾಧ್ಯತೆ ಇರುವ 51 ಅಪಾಯಕಾರಿ ಪ್ರದೇಶಗಳನ್ನು ಗುರುತಿಸಿದ್ದು, ಆ ಪ್ರದೇಶದಲ್ಲಿನ ಅಂದಾಜು 30 ಸಾವಿರ ಜನರ ಆರೋಗ್ಯ ತಪಾಸಣೆ ನಡೆಸಲಾಗುವುದು. ಈ ವೇಳೆ ಕ್ಷಯರೋಗಿಗಳು ಪತ್ತೆಯಾದರೆ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುವುದು ಎಂದರು.

ಪುರಸಭೆ ಉಪಾದ್ಯಕ್ಷೆ ವಿದ್ಯಾ ಬಡಿಗೇರ, ಸದಸ್ಯರಾದ ಮಂಜುನಾಥ ಹಾಲಕೇರಿ, ಮುತ್ತಪ್ಪ ಬಡಿಗೇರ, ಆರೋಗ್ಯ ನಿರೀಕ್ಷಕರಾದ ಕೆ.ಆರ್.ಖಾನ್, ಬಿ.ಆರ್.ಪಾಟೀಲ, ಎಸ್.ಆರ್.ಗರಗ, ಕುಮಾರಸ್ವಾಮಿ ಹಿರೇಮಠ, ಬಿ.ಆರ್.ಮಣ್ಣೇರಿ, ಎಸ್.ವಿ.ಮೇಟಿ, ಶಮ್ಸಾದ್ ಡಾಲಾಯತ, ರಾಜೇಶ ಜಾಲಿಹಾಳ, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.