ಗದಗ: ಅಖಿಲ ಕರ್ನಾಟಕ ಜನಶಕ್ತಿ ವೇದಿಕೆಯಿಂದ ನಗರದಲ್ಲಿ ನಡೆದ ಗಲ್ಲಿ ಕ್ರಿಕೆಟ್ ಲೀಗ್ನಲ್ಲಿ ಮಲ್ಬಾರ್ ಸಿಸಿ ತಂಡ ಜಯ ಗಳಿಸಿತು. ವಿಜೇತ ತಂಡಕ್ಕೆ ಟ್ರೋಫಿ ಹಾಗೂ ₹ 15 ಸಾವಿರ ಬಹುಮಾನ ನೀಡಲಾಯಿತು.
ಲೀಗ್ನ ಅಂತಿಮ ಪಂದ್ಯದಲ್ಲಿ ಮಲ್ಬಾರ್ ಸಿಸಿ ತಂಡದ ವಿರುದ್ಧ ಸೋಲು ಅನುಭವಿಸಿದ ಗರುಡ ಸಿಸಿ ತಂಡಕ್ಕೆ ದ್ವಿತೀಯ ಬಹುಮಾನವಾಗಿ ₹ 7 ಸಾವಿರ ಹಾಗೂ ತೃತೀಯ ಸ್ಥಾನ ಪಡೆದ ಡಿಸಿ ಮಿಲ್ ಸಿಸಿ ತಂಡಕ್ಕೆ ₹ 3 ಸಾವಿರ ಬಹು ಮಾನ ನೀಡಲಾಯಿತು. ಟೂರ್ನಿಯಲ್ಲಿ ಆಶಿಫ್ ಮುಲ್ಲಾ ಉತ್ತಮ ಬ್ಯಾಟ್ಸಮನ್ ಹಾಗೂ ಮುನ್ನಾ ಉತ್ತಮ ಬೌಲರ್ ಆಗಿ ಹೊರಹೊಮ್ಮಿದರು.
‘ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಭಾಗವಹಿಸುವುದು ತುಂಬ ಪ್ರಮುಖವಾಗಿದೆ’ ಎಂದು ಆಯೋಜಕ ಸೈಯ್ಯದ್ಖಾಲೀದ್ ಕೊಪ್ಪಳ ಅವರು ಹೇಳಿದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಅಂದಾನಯ್ಯ ಕುರ್ತಕೋಟಿಮಠ, ಕಿಶನ್ ಮೇರವಾಡೆ, ಕುಮಾರ ಅಣ್ಣಿಗೇರಿ, ಪ್ರೊ.ವಿನಯ ಚಿಕ್ಕಟ್ಟಿ, ಪಿಎಸ್ಐ ವಿ.ಎಸ್. ಜಾವೂರ, ರವಿ ಗುಂಜೀಕರ, ಅರವಿಂದ ಪೂಜಾರ, ವೀರಣ್ಣ ಮೇಟಿ, ಶಿವು ಬಳ್ಳಾರಿ, ಮುನ್ನಾ ಶೇಖ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.