ADVERTISEMENT

ಟ್ಯಾಂಕರ್‌–ಬೈಕ್‌ ಡಿಕ್ಕಿ: ಒಬ್ಬ ಸಾವು, ಮತ್ತೊಬ್ಬನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 14 ಮೇ 2017, 11:42 IST
Last Updated 14 ಮೇ 2017, 11:42 IST
ಟ್ಯಾಂಕರ್‌–ಬೈಕ್‌ ಡಿಕ್ಕಿ: ಒಬ್ಬ ಸಾವು, ಮತ್ತೊಬ್ಬನಿಗೆ ಗಾಯ
ಟ್ಯಾಂಕರ್‌–ಬೈಕ್‌ ಡಿಕ್ಕಿ: ಒಬ್ಬ ಸಾವು, ಮತ್ತೊಬ್ಬನಿಗೆ ಗಾಯ   

ಜಮಖಂಡಿ: ಪೆಟ್ರೋಲ್‌ ಟ್ಯಾಂಕರ್‌ವೊಂದು ಮೋಟರ್‌ ಬೈಕ್‌ಗೆ ಡಿಕ್ಕಿ ಹೊಡೆದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಬ್ಬ ಸಾವನ್ನಪ್ಪಿದ, ಒಬ್ಬ ತೀವ್ರವಾಗಿ ಗಾಯಗೊಂಡಿರುವ ಹಾಗೂ ಎರಡೂ ವಾಹನಗಳು ಸುಟ್ಟು ಕರಕಲಾಗಿರುವ ಘಟನೆ ಇಲ್ಲಿನ ಬಸವೇಶ್ವರ ವೃತ್ತದ ಸಮೀಪ ಜಮಖಂಡಿ–ವಿಜಯಪುರ ರಸ್ತೆಯ ಮೇಲೆ ಶನಿವಾರ ಬೆಳಿಗ್ಗೆ ನಡೆದಿದೆ.

ನಗರದ ರುದ್ರಸ್ವಾಮಿ ಪೇಟ ನಿವಾಸಿ ಶಿವಾನಂದ ಕಡಕೋಳ(50) ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ನಗರದ ರುದ್ರಸ್ವಾಮಿ ಪೇಟ ನಿವಾಸಿ ಅರುಣ ಬಳೋಲಗಿಡದ(31) ಗಾಯಗೊಂಡಿದ್ದಾರೆ. ಘಟನೆಗೆ ಕಾರಣರಾದ ಪೆಟ್ರೋಲ್‌ ಟ್ಯಾಂಕರ್‌ ಚಾಲಕ ಹಾಗೂ ಕ್ಲೀನರ್‌ ಪರಾರಿಯಾಗಿದ್ದಾರೆ.

ಭಾರತ ಪೆಟ್ರೋಲಿಯಂ ಕಂಪೆನಿಗೆ ಸೇರಿದ ಟ್ಯಾಂಕರ್‌ ವಿಜಯಪುರದಿಂದ ಜಮಖಂಡಿ ಕಡೆಗೆ ಬರುತ್ತಿದ್ದಾಗ ಎದುರಿಗೆ ಬಂದ ಮೋಟರ್‌ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಮೋಟರ್‌ ಬೈಕ್‌ನ ಹಿಂಬದಿ ಸವಾರ ಶಿವಾನಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೋಟರ್‌ ಬೈಕ್‌ ಸಂಪೂರ್ಣ ಸುಟ್ಟು ಕರಕಲಾಗಿದೆ.

ADVERTISEMENT

ಟ್ಯಾಂಕರ್‌ನ ಮುಂಭಾಗ ಪೂರ್ಣ ಹಾಳಾಗಿದೆ. ನಗರ ಪೊಲೀಸ್‌ ಠಾಣೆಯ ಪಿಎಸ್‌ಐ ಮನಗೂಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಪಿಐ ಸುನೀಲಕುಮಾರ ನಂದೇಶ್ವರ ತನಿಖೆ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.