ADVERTISEMENT

ಸಕಲೇಶಪುರ ಪಟ್ಟಣಕ್ಕೆ ಬಂದ ಕಾಡಾನೆಗಳು

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 10:29 IST
Last Updated 31 ಡಿಸೆಂಬರ್ 2017, 10:29 IST

ಸಕಲೇಶಪುರ: ಪಟ್ಟಣದ ಕುಶಾಲನಗರ ಬಡಾವಣೆ, ಶುಭಾಷ್‌ ಕ್ರೀಡಾಂಗಣಕ್ಕೆ ಶನಿವಾರ ಕಾಡಾನೆಗಳು ಲಗ್ಗೆ ಇಟ್ಟಿವೆ.

ಶನಿವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಒಂದು ಮರಿ ಆನೆಯೂ ಸೇರಿದಂತೆ ಮೂರು ಆನೆಗಳು ಪಟ್ಟಣಲ್ಲಿ ಸುತ್ತಾಡಿ ಜನರಲ್ಲಿ ಭಯ ಹುಟ್ಟಿಸಿದವು. ಹೇಮಾವತಿ ನದಿ ಪಕ್ಕದ ಹಿಂದೂ ರುದ್ರಭೂಮಿಯಲ್ಲಿ ಕಾಣಿಸಿಕೊಂಡು, ನದಿಯ ಅಕ್ಕಪಕ್ಕದಲ್ಲಿಯೇ ಅಡ್ಡಾಡುತ್ತಿದ್ದವು.

ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಟಾಕಿ ಸಿಡಿಸಿ ವಡೂರು ಕಡೆಗೆ ಓಡಿಸಿದರು. ಶುಕ್ರವಾರ ರಾತ್ರಿ ಕೂಡ ಸಮೀಪದ ಮಳಲಿ ಸುತ್ತಮುತ್ತ ಭತ್ತದ ಬೆಳೆಯನ್ನು ತಿಂದು ಹಾಳು ಮಾಡಿವೆ. ಈ ಗದ್ದೆ ಬಯಲಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಭತ್ತದ ಬೆಳೆ ನಾಶ ಮಾಡಿವೆ ಎಂದು ರೈತರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.