ADVERTISEMENT

ಉದ್ಯಮಿಗಳ ಮನೆ ಮೇಲೂ ಐಟಿ ದಾಳಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 6:57 IST
Last Updated 9 ಸೆಪ್ಟೆಂಬರ್ 2017, 6:57 IST

ಕಲಬುರ್ಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಇಕೆಆರ್‌ಟಿಸಿ) ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಇಲಿಯಾಸ್ ಸೇಠ್ ಬಾಗವಾನ ಅವರ ಮನೆಯಲ್ಲಿ ಶೋಧ ಕಾರ್ಯ ನಡೆಸಿದ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು, ಶುಕ್ರವಾರ ಇಲ್ಲಿಯ ನಾಲ್ಕು ಜನ ಉದ್ಯಮಿಗಳ ಮನೆ ಹಾಗೂ ಕಚೇರಿಗಳ ಮೇಲೂ ದಾಳಿ ಮಾಡಿದರು.

‘ಗಣೇಶ ಮಂದಿರ ಬಡಾವಣೆಯಲ್ಲಿರುವ ಉದ್ಯಮಿ ಖಲೀಲ್ ಸೇಠ್ ಅವರ ನಿವಾಸ ಹಾಗೂ ಕಚೇರಿ, ಇಲಿಯಾಸ್ ಬಾಗವಾನ ಅವರ ಸಹೋದರ ಅಯೂಬ್ ಬಾಗವಾನ ಅವರ ನಿವಾಸ, ಇನ್ನೊಬ್ಬ ಉದ್ಯಮಿ ಮುಜೀಬ್ ಹಾಗೂ ಶಹಾ ಮತ್ತು ಕೊಠಾರಿ ಕುಟುಂಬಗಳಿಗೆ ಸೇರಿದ ಮನೆ ಮೇಲೆ ದಾಳಿ ಮಾಡಿದ 28 ಅಧಿಕಾರಗಳನ್ನು ಒಳಗೊಂಡ ಅಧಿಕಾರಿಗಳ ತಂಡವು ಪರಿಶೀಲನೆ ನಡೆಸಿತು’ ಎಂದು ಮೂಲಗಳು ತಿಳಿಸಿವೆ.

‘ಇಲಿಯಾಸ್ ಬಾಗವಾನ ಅವರ ನಿವಾಸಕ್ಕೆ ಸೆ. 5ರಂದು ದಾಳಿ ಮಾಡಿದ ಅಧಿಕಾರಿಗಳು ಸತತ ಮೂರು ದಿನ ಶೋಧ ಕಾರ್ಯ ನಡೆಸಿ, ವಾಪಸು ತೆರಳಿದರು’ ಎಂಬುದು ಮೂಲಗಳ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT