ADVERTISEMENT

‘ಕಾಂಗ್ರೆಸ್‌ ಸರ್ಕಾರದಿಂದ ಅಭಿವೃದ್ಧಿ’

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 8:34 IST
Last Updated 8 ನವೆಂಬರ್ 2017, 8:34 IST

ಕಮಲಾಪುರ: ತಾಲ್ಲೂಕು ಕೇಂದ್ರವಾಗಿ ರೂಪುಗೊಂಡಿರುವ ಕಮಲಾಪುರ ಸೇರಿದಂತೆ ಸುತ್ತಲಿನ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾಂಗ್ರೆಸ್‌ ಸರ್ಕಾರ ಅಗತ್ಯ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿನಾಥ ಪಾಟೀಲ ಸೊಂತ ತಿಳಿಸಿದ್ದರು.

ಮಂಗಳವಾರ ಆಯೋಜಿಸಿದ್ದ ಮನೆ ಮನೆಗೆ ಕಾಂಗ್ರೆಸ್‌ ಅಭಿಯಾನದಲ್ಲಿ ಮಾತನಾಡಿ, ಹಿಂದೆ ಜಿ.ರಾಮಕೃಷ್ಣ ಶಾಸಕರಾಗಿದ್ದಾಗ ಪದವಿ ಕಾಲೇಜು ಸ್ಥಾಪನೆ ಮಾಡಿ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಡಲಾಯಿತು. ಕಮಲಾಪುರಕ್ಕೆ ನೀರು ಒದಗಿಸುವ ದೂರದೃಷ್ಟಿಯಿಂದ ಗಂಡೋರಿ ನಾಲಾ ಯೋಜನೆ ಅನುಷ್ಠಾನಗೊಳಿಸಿದ್ದಾರೆ. ಬಹುಗ್ರಾಮ ಯೋಜನೆಯಡಿ ಈ ಜಲಾಶಯದ ನೀರು ತರಲಾಗುತ್ತಿದೆ ಕುಡಿಯುವ ನೀರಿನ ಸಮಸ್ಯೆ ದೂರವಾಗಿದೆ ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಅವರ ಪರಿಶ್ರಮದಿಂದ ಜಾರಿಯಾದ 371(ಜೆ)ಯಿಂದ ಸರ್ಕಾರಿ ಉದ್ಯೋಗ ದೊರೆತಿದೆ. ವಿವಿಧ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ರಾಜ್ಯ ಹೆದ್ದಾರಿಯನ್ನಾಗಿ ಮಾಡಲಾಗಿದೆ ಎಂದರು.

ADVERTISEMENT

ಕಾಂಗ್ರೆಸ್‌ ಮುಖಂಡರಾದ ಜಿ.ಆರ್‌.ವಿಜಯಕುಮಾರ, ರಾಜು ಚಿಕ್ಕೆಗೌಡ, ಯುವ ಕಾಂಗ್ರೆಸ್‌ ಅಧ್ಯಕ್ಷ ಹಣಮಂತ ಹರಸೂರ, ಇಬ್ರಾಹಿಂ ಸಾಬ ಅತ್ತಾರ, ಎಪಿಎಂಸಿ ನಿರ್ದೇಶಕ ಬಾಬುರಾವ ಮರಮಂಚಿ, ಗ್ರಾ.ಪಂ. ಅಧ್ಯಕ್ಷ ಅಬ್ದುಲ್‌ ಸತ್ತಾರ, ಸುಭಾಷ ಸುಗೂರ, ಮಲ್ಲಪ್ಪ ಗೊಬ್ಬರವಾಡಿ, ಬಸವರಾಜ ಮಠಪತಿ, ಅಮರ ಚಿಕ್ಕೆಗೌಡ, ಸಂತೋಷ ಕಲ್ಯಾಣ, ಮಕದುಮ್‌ ಖಾಜಿ, ಮಲ್ಲು ಹಳ್ಳಾ, ಜಮೀರ ಅಹಮ್ಮದ್‌, ರಾಜು ಗೌರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.