ಅಫಜಲಪುರ: ತಾಲ್ಲೂಕಿನ ಗೌರ(ಬಿ) ಗ್ರಾಮದ ಸಿದ್ಧಾರ್ಥ ನಗರಕ್ಕೆ ಸಂಚರಿಸುವ ಏಕೈಕ ರಸ್ತೆ ಮಳೆಯಿಂದ ಹಾಳಾಗಿ ಹೋಗಿದ್ದು, ಜನರು ಮುಖ್ಯರಸ್ತೆಯಿಂದ ಸಿದ್ಧಾರ್ಥ ನಗರಕ್ಕೆ ತೆರಳಲು ಪರದಾಡುವಂತಾಗಿದೆ.
ಈ ಕುರಿತು ಶ್ರೀಶೈಲ ಪಾಟೀಲ ಹಾಗೂ ಸಿದ್ಧಾರ್ಥ ನಗರದ ಮುಖಂಡರಾದ ರವಿಕುಮಾರ ಸಿಂಗೆ, ಭೀಮರಾವ್ ಗೌರ ರಸ್ತೆ ಹಾಳಾದ ಬಗ್ಗೆ ಮಾಹಿತಿ ನೀಡಿ ಸಿದ್ಧಾರ್ಥ ನಗರಕ್ಕೆ ಮುಖ್ಯ ರಸ್ತೆಯಿಂದ 1 ಕಿ.ಮೀ ರಸ್ತೆಯಿದ್ದು, ಮಳೆ ಬಂದರೆ ನೀರು ನಿಂತು ರಸ್ತೆ ಹಾಳಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ ಇದಕ್ಕಾಗಿ ನಾವು ಅಫಜಲಪುರಕ್ಕೆ ಮತ್ತು ಬೇರೆ ಕಡೆ ಸಂಚರಿಸಬೇಕಾದರೆ ರಸ್ತೆ ಇಲ್ಲದಂತಾಗಿದೆ. ಈ ಕುರಿತು ಹಲವು ಬಾರಿ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದರೂ ಯಾರೂ ಗಮನಹರಿಸುತ್ತಿಲ್ಲ ಎಂದು ಅವರು ಆರೋಪಿಸಿದರು.
ರಸ್ತೆ ದುರಸ್ತಿ ಮಾಡುವ ಬಗ್ಗೆ ಶಾಸಕರಿಗೆ ಕೇಳಿಕೊಂಡಿದ್ದೇವೆ. ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಮಳೆ ಬಂದಾಗ ನಮಗೆ ದೊಡ್ಡ ಸಮಸ್ಯೆಯಾಗುತ್ತದೆ. ಸಿದ್ಧಾರ್ಥ ನಗರ ಬಿಟ್ಟು ಬೇರೆ ಕಡೆ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಇದರ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.