ADVERTISEMENT

ಕಾವೇರಿ ತಾಲ್ಲೂಕು ರಚನೆಗೆ ಆಗ್ರಹ

ಕುಶಾಲನಗರದ ತೆಲುಗು ಶೆಟ್ಟರ ಸಂಘದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 11:13 IST
Last Updated 31 ಡಿಸೆಂಬರ್ 2017, 11:13 IST

ಕುಶಾಲನಗರ: ಕಾವೇರಿ ತಾಲ್ಲೂಕು ರಚನೆಗೆ ಒತ್ತಾಯಿಸಿ ಇಲ್ಲಿ ನಡೆಯುತ್ತಿರುವ ಮೂರನೇ ಹಂತದ ಹೋರಾಟ ಶನಿವಾರಕ್ಕೆ 8 ದಿನಗಳನ್ನು ಪೂರೈಸಿದೆ.

ಗುಂಡೂರಾವ್ ಸತ್ಯಾಗ್ರಹ ವೇದಿಕೆಯಲ್ಲಿ ನಡೆದ ಧರಣಿಯಲ್ಲಿ ತೆಲುಗು ಶೆಟ್ಟರ ಕ್ಷೇಮಾಭಿವೃದ್ಧಿ ಸಮಾಜದ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು.

‌ತಾಲ್ಲೂಕು ರಚನೆ ಪರ ಘೋಷಣೆ ಕೂಗಿದರು. ಎಲ್ಲಾ ಅರ್ಹತೆಗಳಿದ್ದರೂ ಕುಶಾಲನಗರವನ್ನು ಕಡೆಗಣಿಸಿದ್ದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಮಧ್ಯಾಹ್ನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಶ್ರೀ ಗಣಪತಿ ದೇವಾಲಯ ಎದುರು ಮೈಸೂರು-ಮಡಿಕೇರಿ ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆದು ಪ್ರತಿಭಟಿಸಲಾಯಿತು.

ಸಮಾಜದ ಅಧ್ಯಕ್ಷ ಎಚ್.ಆರ್. ಮಂಜುನಾಥ, ಕಾರ್ಯದರ್ಶಿ ಎಚ್.ವಿ. ಪ್ರಕಾಶ, ಪದಾಧಿಕಾರಿಗಳಾದ ಶಿವಲಿಂಗ ಶೆಟ್ಟಿ, ಕಾಶಿ, ಕಾಮತರಾಜ ಶೆಟ್ಟಿ, ಪುಟ್ಟಣ್ಣಯ್ಯ ಶೆಟ್ಟಿ, ಮಾದೇವ ಶೆಟ್ಟಿ, ರಂಗಶೆಟ್ಟಿ, ಗೋವಿಂದರಾಜ ಶೆಟ್ಟಿ, ಬಲರಾಜು ಶೆಟ್ಟಿ, ಕಾವೇರಿ ತಾಲೂಕು ರಚನಾ ಹೋರಾಟ ಕೇಂದ್ರ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.