ADVERTISEMENT

ಗುಡುಗು ಸಹಿತ ರಭಸದ ಮಳೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 8:57 IST
Last Updated 15 ಸೆಪ್ಟೆಂಬರ್ 2017, 8:57 IST

ಶನಿವಾರಸಂತೆ: ಪಟ್ಟಣ ಹಾಗೂ ಹೋಬಳಿಯಾದ್ಯಂತ ಗುರುವಾರ ಸಂಜೆ 3ರಿಂದ ಸುರಿಯಲಾರಂಭಿಸಿದ ಗುಡುಗು ಸಹಿತ ಮಳೆ 4ರ ನಂತರ ತೀವ್ರತೆ ಪಡೆಯಿತು.ಅರ್ಧ ಇಂಚು ಮಳೆಯಾಗಿದೆ.

ನಾಲ್ಕೈದು ದಿನಗಳಿಂದ ಬಿರುಬಿಸಿಲಿನಿಂದ ಜನತೆ ತತ್ತರಿಸುತ್ತಿದ್ದು ಸೆಕೆಯ ಧಗೆಯಿಂದ ಬೇಸತ್ತು ಮಳೆಗಾಗಿ ಹಂಬಲಿಸುತ್ತಿದ್ದರು. ಕಾದಿದ್ದ ಭೂಮಿ ಸುರಿದ ಮಳೆಗೆ ತಂಪಾಯಿತು.

ಗದ್ದೆಗಳಲ್ಲಿ ನೀರಾಗಿದ್ದು ರೈತರು ನೆಮ್ಮದಿ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಕಾಫಿ ತೋಟಗಳಲ್ಲಿ ಗೊಬ್ಬರ ಹಾಕುವ ಕೆಲಸ ನಡೆದಿದ್ದು ಮಳೆಯ ಪ್ರಮಾಣ ಅಧಿಕವಾದರೆ ಗಿಡಗಳಿಗೆ ಕೊಳೆರೋಗ ತಗಲುವ ಸಂಭವವಿದೆ ಎನ್ನುತ್ತಾರೆ ಬೆಳೆಗಾರರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.