ADVERTISEMENT

ತರಕಾರಿ ಬೆಲೆ ಏರಿಕೆ: ಗ್ರಾಹಕ ಕಂಗಾಲು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 9:17 IST
Last Updated 21 ನವೆಂಬರ್ 2017, 9:17 IST

ಮಡಿಕೇರಿ: ತರಕಾರಿ ಬೆಲೆ ದಿನದಿಂದ ದಿನಕ್ಕೆ ಗಗನಮುಖಿ ಆಗುತ್ತಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ. ಟೊಮೆಟೊ, ನುಗ್ಗೇಕಾಯಿ ಹಾಗೂ ಈರುಳ್ಳಿ ಖರೀದಿಸಲು ಹಿಂದೇಟು ಹಾಕುವ ಸ್ಥಿತಿಯಿದೆ.

ಪ್ರತಿ ಕೆ.ಜಿ ಟೊಮೆಟೊಗೆ ₹ 60. ನುಗ್ಗೇಕಾಯಿ ₹ 80ಕ್ಕೆ ಏರಿಕೆಯಾಗಿದ್ದಾರೆ, ಈರುಳ್ಳಿ ದರವು ₹ 50 ಆಗಿದೆ. ಅದು ಮಾತ್ರವಲ್ಲದೇ ಉಳಿದ ತರಕಾರಿಗಳೂ ದುಬಾರಿಯಾಗಿವೆ. ಬೆಳ್ಳುಳ್ಳಿ ಕೆ.ಜಿ.ಗೆ ₹ 60, ಹೂಕೋಸು ₹ 50, ಹಸಿರುಮೆಣಸಿನಕಾಯಿ ₹ 40, ಕ್ಯಾಪ್ಸಿಕಂ ₹ 40, ಬೀಟ್‌ರೂಟ್‌ ₹ 50, ಕ್ಯಾಬೇಜ್‌ ₹ 50 ಆಗಿದೆ.

ಉಳಿದಂತೆ ಬೆಂಡೆಕಾಯಿ ₹ 30, ಮೂಲಂಗಿ ₹ 30, ಆಲೂಗೆಡ್ಡೆ ₹ 25, ಬೆಳ್ಳಾರೆ ₹ 20, ಕುಂಬಳಕಾಯಿ ₹ 20, ಹೀರೇಕಾಯಿ ₹ 20, ಪಡುವಲಕಾಯಿ ₹ 30, ತೊಂಡೆಕಾಯಿ ₹ 40, ಕೆ.ಜಿ ಬೀನ್ಸ್‌ಗೆ ₹ 40. ದೊಡ್ಡಗಾತ್ರದ ತೆಂಗಿನಕಾಯಿಗೆ ₹ 25ರಿಂದ ₹ 30 ದರ ಇದೆ. ಕೊತ್ತಂಬರಿ ಸೊಪ್ಪು ಕಟ್ಟಿಗೆ ₹ 5, ಮೆಂತ್ಯಕ್ಕೆ ₹ 4 ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.