ವಿರಾಜಪೇಟೆ: ಸಮೀಪದ ಅಮ್ಮತ್ತಿ ಕಾವಡಿಯಲ್ಲಿ ನಡೆದ ಮುಕ್ತ ರ್್ಯಾಲಿಯಲ್ಲಿ ತಮಿಳುನಾಡು, ಕೇರಳ ಸೇರಿದಂತೆ ವಿವಿಧ ರಾಜ್ಯಗಳ ಪಟುಗಳು ಭಾಗವಹಿಸಿದ್ದರು.
1400 ಸಿಸಿ ವಿಭಾಗದಲ್ಲಿ ಮೋಹಿನ್ ಪಾಷಾ ಮೊದಲ ಸ್ಥಾನ ಪಡೆದರೆ, ಮೊಹಮದ್ ಸಾಹಿಲ್ ದ್ವಿತೀಯ ಹಾಗೂ ಹರ್ಷ ನಟರಾಜ್ ತೃತೀಯ ಸ್ಥಾನ ಪಡೆದರು.600 ಸಿಸಿ ವಿಭಾಗದಲ್ಲಿ ಧರ್ಮ ಚಂದ್ರಶೇಖರ್ ಪ್ರಥಮ, ವಿಕ್ರಂ ಗೌಡ ದ್ವಿತೀಯ ಹಾಗೂ ವಿಶಾಲ್ ರಾಜ್ ತೃತೀಯ ಸ್ಥಾನ ಪಡೆದರು.
ಕೂರ್ಗ್ ಓಪನ್ ವಿಭಾಗದಲ್ಲಿ ಸಮೃದ್ಧ ನಂಜಪ್ಪ ಪ್ರಥಮ, ರಾಜಶೇಖರ್ ಗೌಡ ದ್ವಿತೀಯ ಹಾಗೂ ನಿಶ್ಚಲ್ ಅಯ್ಯಪ್ಪ ತೃತೀಯ ಸ್ಥಾನ ಪಡೆದರು.ಮುಕ್ತ ವಿಭಾಗದಲ್ಲಿ ರಿತೇಶ್ ಎಂ. ಗುತ್ತೆದಾರ್ ಪ್ರಶಸ್ತಿ ಪಡೆದುಕೊಂಡರು. ರೋಲ್ ಕೇಜ್ ವಿಭಾಗದಲ್ಲಿ ವಿಕ್ರಂ ಗೌಡ ಪ್ರಥಮ ಹಾಗೂ ಅವಿನಾಶ್ ದ್ವಿತೀಯ ಪ್ರಶಸ್ತಿ ಪಡೆದುಕೊಂಡರು.ಜಿಪ್ಸಿ ಓಪನ್ ಕ್ಲಾಸ್ನಲ್ಲಿ ಗಗನ್ ಕರುಂಬಯ್ಯ ಪ್ರಥಮ, ಅವಿನ್ ನಂಜಪ್ಪ ದ್ವಿತೀಯ ಹಾಗೂ ಅಮೃತ್ ತಿಮ್ಮಯ್ಯ ತೃತೀಯ ಬಹುಮಾನ ಪಡೆದರು.
800 ಸಿಸಿ ವಿಭಾಗದಲ್ಲಿ ನಿಖಿಲ್ ಚಂಗಪ್ಪ ಪ್ರಥಮ, ವಾಸೀಂ ಪಾಷಾ ದ್ವಿತೀಯ ಬಹುಮಾನ ಪಡೆದರು.ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಲು ಒಟ್ಟು 97 ಸ್ವರ್ಧಿಗಳು ನೋಂದಣಿ ಮಾಡಿಕೊಂಡಿದ್ದರು. ಆದರೆ ಮಧ್ಯಾಹ್ನದ ನಂತರ ಸುರಿದ ಮಳೆಯಿಂದಾಗಿ ಕಾರ್ ವಿಭಾಗದ 17 ಸ್ಪರ್ಧಿಗಳು ರ್್ಯಾಲಿಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.