ADVERTISEMENT

ಬೈಕ್ ಕಾರು ಮಧ್ಯೆ ಅಪಘಾತ: ಟ್ರಾಫಿಕ್ ಪಿಎಸ್‌ಐ ಪ್ರಾಣಾಪಾಯದಿಂದ ಪಾರು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2017, 10:29 IST
Last Updated 7 ಫೆಬ್ರುವರಿ 2017, 10:29 IST

ಮಂಡ್ಯ: ಕೆ.ಆರ್. ಪೇಟೆ ತಾಲ್ಲೂಕಿನ ಗಾಂಧಿನಗರ ಬಳಿ ಬೈಕ್‌ಗೆ ಡಿಕ್ಕಿಯಾಗಿ ಕಾಲುವೆಗೆ ಕಾರು ಉರುಳಿದ್ದು, ಚಾಲಕ ಯೋಗೇಶ್‌ಗೆ ಸೊಂಟ ಮುರಿದಿದ್ದು, ಪಿ.ಎಸ್.ಐ ಸವಿತಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮದ್ದೂರು ಟ್ರಾಫಿಕ್ ಠಾಣೆ ಪಿ.ಎಸ್.ಐ ಸಿ.ಯು ಸವಿತಾ ಅವರು ನ್ಯಾಯಾಲಯಕ್ಕೆಂದು ಹಾಸನಕ್ಕೆ ತೆಲಳುತ್ತಿದ್ದರು. ಬೈಕ್ ಚಾಲಕ ಗೋವಿಂದ ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಕೆ.ಆರ್.ಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಕಿಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಚಾಲಕ ಯೋಗೇಶ್ ಎಸ್.ಎಂ. ಕೃಷ್ಣ ಅವರ ಪರಮಾಪ್ತರ ಪುತ್ರ.

ADVERTISEMENT

ಅಡಿಗಾಸ್ ಪ್ರಸನ್ನ ಅವರ ಪುತ್ರ ಯೋಗೇಶ್‌ಗೆ ಸೊಂಟ ಮುರಿದಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.