ADVERTISEMENT

ರಸ್ತೆಯಲ್ಲಿ ಹರಿಯುವ ಚರಂಡಿ ನೀರು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 6:49 IST
Last Updated 19 ಸೆಪ್ಟೆಂಬರ್ 2017, 6:49 IST

ಕೆ.ಆರ್.ಪೇಟೆ: ಪಟ್ಟಣದ ಬಸವೇಶ್ವರ ನಗರ ಬಡಾವಣೆಯಲ್ಲಿ ಒಳಚರಂಡಿಗೆ ಅಳವಡಿಸಿರುವ ಮ್ಯಾನ್ ಹೋಲ್ ಗಳು ಒಡೆದು ಕಲುಷಿತ ನೀರು ರಸ್ತೆಯಲ್ಲಿ ಹರಿಯುತ್ತಿರುವುದರಿಂದ ಸಾರ್ವಜನಿಕರಿಗೆ ಓಡಾಡಲು ಕಿರಕಿರಿ ಉಂಟಾಗಿದೆ.

ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಸರಿಯಾಗಿ ನಡೆಯದೆ ಹದಗೆಟ್ಟಿರುವುದರಿಂದ ಮ್ಯಾನ್ ಹೋಲ್ ಗಳಲ್ಲಿ ನೀರು ಕಟ್ಟಿಕೊಂಡು ಪೈಪ್ ಲೈನ್‌ನಲ್ಲಿ ನೀರು ಸರಾಗವಾಗಿ ಹೋಗಲಾರದೆ ಹೊರಬರುತ್ತಿದೆ. ಇದರಿಂದ ಬಡಾವಣೆಯ ನಾಗರಿಕರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ.

ಮಳೆಗಾಲವಾಗಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ. ರೋಗಗಳು ಹರಡುವ ಮುನ್ನ ಪುರಸಭೆ ತಕ್ಷಣ ಇತ್ತ ಗಮನಹರಿಸಿ ಒಡೆದಿರುವ ಮ್ಯಾನ್ ಹೋಲ್ ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ. ಎಚ್.ಆರ್.ಲೋಕೇಶ್ ಹಾಗೂ ಜಯನಗರ ಬಡಾವಣೆಯ ನಿವಾಸಿಗಳು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.