ADVERTISEMENT

ಸಿದ್ದಗಂಗಾ ಶ್ರೀ ವಿರುದ್ಧ ಹೇಳಿಕೆ: ಕ್ಷಮೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 6:37 IST
Last Updated 16 ಸೆಪ್ಟೆಂಬರ್ 2017, 6:37 IST

ಮಸ್ಕಿ: ತುಮಕೂರಿನ ಸಿದ್ದಗಂಗಾ ಸ್ವಾಮೀಜಿ ವಿರುದ್ಧ ಹೇಳಿಕೆ ನೀಡಿರುವ ಬಸವ ಕೇಂದ್ರದ ಅಧ್ಯಕ್ಷೆ ಮಾತೆ ಮಹಾದೇವಿ ಅವರು ಕೂಡಲೇ ಕ್ಷಮೆ ಕೋರಬೇಕು ಎಂದು ವೀರಶೈವ ಮಹಾಸಭಾ ಮಸ್ಕಿ ಯುವ ಘಟಕದ ಅಧ್ಯಕ್ಷ ವೀರೇಶ ಪಾಟೀಲ ಆಗ್ರಹಿಸಿದ್ದಾರೆ.

‘ಮಹಾದೇವಿ ಅವರ ಹೇಳಿಕೆಯಿಂದ ಭಕ್ತರಿಗೆ ನೋವಾಗಿದೆ. ಸಿದ್ದಗಂಗಾ ಶ್ರೀ ಎಲ್ಲಾ ಪ್ರಶಸ್ತಿಯನ್ನು ಮೀರಿ ನಿಂತವರು. ಮಹಾದೇವಿ ಕ್ಷಮೆ ಕೇಳದಿದ್ದರೆ ವೀರಶೈವ ಮಹಾಸಭಾದ ಯುವ ವೇದಿಕೆ ಹೋರಾಟ ನಡೆಸಲಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT